ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ತನ್ನ ಎಲ್ಲ ಸಚಿವರು ಹಾಗೂ ಸಚಿವಾಲಯಗಳಿಗೆ ಸೂಚನೆಯೊಂದನ್ನು ನೀಡಿದ್ದಾರೆ. ಅಲ್ಲದೆ ನಿರ್ದಿಷ್ಟ ಎರಡು ಕಡೆಯಿಂದ ಬರುವ ಸಲಹೆ-ಸೂಚನೆಗಳನ್ನು ನಿರ್ಲಕ್ಷಿಸಬೇಡಿ ಎಂಬ ಕಿವಿಮಾತನ್ನೂ ಹೇಳಿದ್ದಾರೆ.
ಸಚಿವರು ಹಾಗೂ ಕೇಂದ್ರ ಸಚಿವಾಲಯದ ಅಧಿಕಾರಿಗಳೊಂದಿಗೆ ಶುಕ್ರವಾರ ನಡೆಸಿದ್ದ ಸುದೀರ್ಘ ಸಭೆಯೊಂದರಲ್ಲಿ ಮಾತುಕತೆ ನಡೆಸಿದ ಮೋದಿ ಈ ಸೂಚನೆಯನ್ನು ನೀಡಿದ್ದಾರೆ ಎಂಬದಾಗಿ ಮೂಲಗಳು ರವಿವಾರ ತಿಳಿಸಿವೆ.
ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ ಸೆಕ್ರೆಟರಿಯಟ್ (ಎನ್ಎಸ್ಸಿಎಸ್) ಮತ್ತು ನ್ಯಾಷನಲ್ ಸೆಕ್ಯುರಿಟಿ ಅಡ್ವೈಸರ್ (ಎನ್ಎಸ್ಎ) ಕಡೆಯಿಂದ ನೀಡಲಾಗುವ ಯಾವುದೇ ಸೂಚನೆಯನ್ನು ನಿರ್ಲಕ್ಷಿಸಬೇಡಿ, ಅವುಗಳನ್ನು ಗಂಭೀರವಾಗಿ ಪರಿಗಣಿಸಿ ಎಂಬುದಾಗಿ ಪ್ರಧಾನಿ ಸೂಚನೆ ನೀಡಿದ್ದಾರೆ.
ಯಾವುದೇ ನೀತಿಯನ್ನು ರೂಪಿಸುವಾಗ ಅದನ್ನು ಭಾರತದ ತಂತ್ರಾತ್ಮಕ ದೃಷ್ಟಿಕೋನದಲ್ಲೂ ನೋಡಬೇಕಾಗುತ್ತದೆ. ಆದರೆ ಎನ್ಎಸ್ಸಿಎಸ್ ಮತ್ತು ಎನ್ಎಸ್ಎ ಸೂಚನೆಗಳಿಗೆ ಆದ್ಯತೆ ತೋರದ ಪ್ರಕರಣಗಳು ಈ ಹಿಂದೆ ಕಂಡುಬಂದಿದ್ದವು ಎಂದಿರುವ ಅವರು ಇದೇ ಹಿನ್ನೆಲೆಯಲ್ಲಿ ಈ ಸೂಚನೆಯನ್ನು ನೀಡಿದ್ದಾರೆ. –ಏಜೆನ್ಸೀಸ್
‘ಎಲ್ರೂ ನನ್ನ ಶವ ನೋಡಲು ಬನ್ನಿ, ಇಲ್ಲಂದ್ರೆ ದೆವ್ವ ಆಗಿ ಬರ್ತೀನಿ’; ಡೆತ್ನೋಟ್ನಲ್ಲಿತ್ತು ಈ ಕೊನೇ ಆಸೆ