ಬೆಂಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್ ದಿಢೀರ್ ಭೇಟಿ ಮಾಡಿದ ಸುಧಾಮ್ ದಾಸ್! ಮೇಲ್ಮನೆಗೆ ಸುಧಾಮ್ ಹೆಸರು ಶಿಫಾರಸ್ಸಿಗೆ ಕೆಲವು ಸಚಿವರು ವಿರೋಧ ವ್ಯಕ್ತಪಡಿಸಿದ್ದ ಬೆನ್ನಲ್ಲೆ ಭೇಟಿ ಕುತೂಹಲ ಮೂಡಿಸಿತ್ತು.
ಗೃಹ ಸಚಿವ ಪರಮೇಶ್ವರ್ ಕೊಠಡಿಯಲ್ಲಿ ಡಿಕೆಶಿ ಮತ್ತು ಸುಧಾಮ್ ಭೇಟಿ ಮಾಡಿ ಸುಮಾರು ಅರ್ಧ ಗಂಟೆ ಕಾಲ ರಹಸ್ಯ ಚರ್ಚೆ ನಡೆಸಿದರು.
ಸುಧಾಮ್ ದಾಸ್ ಜತೆಗೆ ಪರಮೇಶ್ವರ್ ಭೇಟಿಗೆ ಡಿ.ಕೆ.ಶಿವಕುಮಾರ್ ಯತ್ನ ನಡೆಸಿದರಲ್ಲದೇ
ಸುಧಾಮ್ ದಾಸ್ ಕರೆದುಕೊಂಡು ತಾವೇ ಪರಮೇಶ್ವರ್ ಕಚೇರಿಗೆ ಬಂದಿದ್ದರು. ಆದರೆ ಅಷ್ಟೊತ್ತಿಗಾಗಲೇ ಪರಮೇಶ್ವರ್ ಸಚಿವ ಸಂಪುಟ ಸಭೆಗೆ ತೆರಳಿದ್ದರು.
ಬಳಕ ಸ್ವಲ್ಪ ಹೊತ್ತಿಗಾಗಲೇ ಸುಧಾಮ್ ದಾಸ್ ಮೇಲ್ಮನೆಗೆ ಆಯ್ಕೆ ಮಾಡಿರುವ ರಾಜ್ಯಪತ್ರ ಪ್ರಕಟವಾಗಿತ್ತು