More

    ನಾನು ಬೀದಿಗೆ ಬಂದಿರುವೆ, ನನ್ನ ಕೈ ಹಿಡಿಯಿರಿ… ಎಂದು ಬೇಡಿದ ಅಖಂಡ ಶ್ರೀನಿವಾಸ ಮೂರ್ತಿ

    ಬೆಂಗಳೂರು: ನಾನು ಬೀದಿಗೆ ಬಂದಿರುವೆ, ನನ್ನ ಕೈ ಹಿಡಿಯಿರಿ… ಎಂದು ಪುಲಿಕೇಶಿನಗರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಕೋರಿದ್ದಾರೆ.

    ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಕಾವಲ್​ಭೈರಸಂದ್ರ ಗಲಭೆಯಲ್ಲಿ ಮನೆ ಕಳೆದುಕೊಂಡ ಶಾಸಕ ಅಖಂಡ ಶ್ರೀನಿವಾಸ್​ ಮೂರ್ತಿ ಕಾಂಗ್ರೆಸ್​ನ ಕೆಲ ನಾಯಕರ ವಿರುದ್ಧ ಮತ್ತೊಮ್ಮೆ ಅಸಮಾಧಾನ ಹೊರಹಾಕಿದ್ದಾರೆ. ‘ದಿಗ್ವಿಜಯ ನ್ಯೂಸ್’ ಜತೆ ಮಾತನಾಡಿದ ಶಾಸಕರು, ಈ ಪ್ರಕರಣದಲ್ಲಿ ಕೆಲ ನಾಯಕರು ನನಗೆ ಯಾವ ಕಾರಣಕ್ಕೆ ಸಪೋರ್ಟ್ ಮಾಡ್ತಿಲ್ಲ ಅನ್ನೋದು ಗೊತ್ತಿಲ್ಲ. ಶನಿವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಮಾಡುವೆ. ಆಗಲೂ ಅವರು ಸಹಕಾರ ಕೊಡಲಿಲ್ಲ ಅಂದ್ರೆ ಈ ಸಂಬಂಧ ದೆಹಲಿಗೆ ಪತ್ರ ಬರೆಯುವ ಬಗ್ಗೆ ಚಿಂತನೆ ಮಾಡ್ತೀನಿ ಎಂದರು.

    ನಾನು ಬೀದಿಗೆ ಬಂದಿರುವೆ, ನನ್ನ ಕೈ ಹಿಡಿಯಿರಿ... ಎಂದು ಬೇಡಿದ ಅಖಂಡ ಶ್ರೀನಿವಾಸ ಮೂರ್ತಿನನಗೆ ಇಲ್ಲಿಯವರೆಗೂ ಮಾಧ್ಯಮ, ಪೊಲೀಸ್ ಇಲಾಖೆ, ನ್ಯಾಯಾಲಯದಿಂದ ಸಹಕಾರ ಸಿಕ್ಕಿದೆ. ನನ್ನ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ. ನಮ್ಮ ಪಕ್ಷದ ನಾಯಕರ ಮೇಲೆ ನಂಬಿಕೆ ಇದೆ. ಅವರು ನನಗೆ ನ್ಯಾಯ ಸಿಗುವಂತೆ ಮಾಡುತ್ತಾರೆ ಎಂಬ ನಂಬಿಕೆ ಇದೆ. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಶಾಸಕ ಜಮೀರ್ ಅಹಮದ್ ಖಾನ್ ಅವರ ಸಪೋರ್ಟ್ ನನಗಿದೆ. ಆದರೆ ಡಿಕೆಶಿ ಅವರಿಂದ ಇನ್ನೂ ಸಹಕಾರ ಸಿಕ್ಕಿಲ್ಲ ಎಂದು ಬೇಸರಿಸಿದ ಅಖಂಡ ಶ್ರೀನಿವಾಸ ಮೂರ್ತಿ, ಮತ್ತೊಮ್ಮೆ ನಮ್ಮ ಪಕ್ಷದ ಅಧ್ಯಕ್ಷರ ಬಳಿ ಮನವಿ ಮಾಡುವೆ. ನಾನು ಶಾಸಕ. ಆದರೀಗ ಬೀದಿಗೆ ಬಂದಿದ್ದೇನೆ, ನನ್ನ ಕೈ ಹಿಡಿಯಿರಿ ಎಂದು ಕೇಳುವೆ. ನಮ್ಮ ಮನೆ ಸುಟ್ಟಿದೆ. ಅಧ್ಯಕ್ಷರು ಸಪೋರ್ಟ್ ಮಾಡಬೇಕು ಎಂದರು.

    ಸಂಪತ್ ರಾಜ್ ಅವರನ್ನ ಪಕ್ಷದಿಂದ ಉಚ್ಛಾಟನೆ ಮಾಡುವಂತೆ ಮನವಿ ಮಾಡಿದೆ. ಆದರೆ ಇಲ್ಲಿಯವರೆಗೂ ಉಚ್ಛಾಟನೆ ಮಾಡಿಲ್ಲ ಎಂದು ಡಿಕೆಶಿ ವಿರುದ್ಧ ಬೇಸರ ವ್ಯಕ್ತಪಡಿಸಿದ ಅಖಂಡ ಶ್ರೀನಿವಾಸ ಮೂರ್ತಿ, ಜಾರ್ಜ್ ನಮ್ಮ ಪಕ್ಕದ ಕ್ಷೇತ್ರದವರು. ನನಗೆ ಸಹಕಾರ ಕೊಡುವಂತೆ ಅವರ ಬಳಿಯೂ ಮನವಿ ಮಾಡ್ತೀನಿ. ಡಾ.ಜಿ. ಪರಮೇಶ್ವರ ಅವರು ಈ ಬಗ್ಗೆ ಇಲ್ಲಿಯವರೆಗೆ ಏನೂ ಮಾತನಾಡಿಲ್ಲ ಎಂದರು.

    ನಾನು ಬೀದಿಗೆ ಬಂದಿರುವೆ, ನನ್ನ ಕೈ ಹಿಡಿಯಿರಿ... ಎಂದು ಬೇಡಿದ ಅಖಂಡ ಶ್ರೀನಿವಾಸ ಮೂರ್ತಿಕಳೆದ ಆಗಸ್ಟ್​ನಲ್ಲಿ ಸಂಭವಿಸಿದ ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸಿತ್ತು. ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆ, ಪೊಲೀಸ್​ ಠಾಣೆ, ಅಂಗಡಿಗಳು ಸೇರಿದಂತೆ ಸಿಕ್ಕಸಿಕ್ಕ ವಾಹನಗಳ ಮೇಲೆ ಕಿಡಿಗೇಡಿಗಳ ಗುಂಪು ಮನಸೋಇಚ್ಛೆ ದಾಂಧಲೆ ನಡೆಸಿತ್ತು. ಪುಂಡರು ಶಾಸಕರ ಮನೆಗೂ ಬೆಂಕಿ ಇಟ್ಟು ವಿಕೃತಿ ಮೆರೆದಿದ್ದರು.

    ಈ ಘಟನೆ ನಡೆದ ಮೂರ್ನಾಲ್ಕು ದಿನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅಖಂಡ ಶ್ರೀನಿವಾಸಮೂರ್ತಿ, ಗಲಭೆ ನಡೆದು ಇಷ್ಟು ದಿನವಾದರೂ ಕೆಪಿಸಿಸಿ ಅಧ್ಯಕ್ಷರು ನನ್ನ ಮನೆಗೆ ಭೇಟಿ ನೀಡಿಲ್ಲ. ಕಾಂಗ್ರೆಸ್​ನವರು ನನ್ನ ನೆರವಿಗೆ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ಸುಟ್ಟು ಹೋಗಿರುವುದು ನಾನು ಬಾಳಿ ಬದುಕಿದ ಮನೆ, ಡಿ.ಕೆ.ಶಿವಕುಮಾರ್​ ಅವರ ಮನೆ ಸುಟ್ಟಿಲ್ಲ. ಅವರು ನನ್ನ ಮನೆಯನ್ನು ಬಂದು ನೋಡಲಿ, ಆಮೇಲೆ ಮಾತನಾಡಲಿ ಎಂದು ಅಸಮಾಧಾನ ಹೊರಹಾಕಿದ್ದರು.

    ಇದಾದ ಬಳಿಕವೂ ಪದೇಪದೆ ತನಗೆ ನ್ಯಾಯ ಕೊಡಿಸುವಲ್ಲಿ ಪಕ್ಷದ ಅಧ್ಯಕ್ಷರು ಸಹಕರಿಸುತ್ತಿಲ್ಲ ಎಂಬ ಅಸಮಾಧಾನಿತ ಮಾತುಗಳು ಅಖಂಡ ಶ್ರೀನಿವಾಸ ಮೂರ್ತಿ ಅವರಿಂದ ಬರುತ್ತಲೇ ಇವೆ.

    ಡಿಜೆ ಹಳ್ಳಿ ಗಲಭೆ​: ಬೆಂಗಳೂರಿನ 43 ಕಡೆ ಏಕಕಾಲಕ್ಕೆ ಎನ್​ಐಎ ದಾಳಿ, ಮಾರಕಾಸ್ತ್ರ ಜಪ್ತಿ

    ಕಾಂಗ್ರೆಸ್​ ವಿರುದ್ಧ ಅಖಂಡ ಶ್ರೀನಿವಾಸ್​ ಮೂರ್ತಿ ಆಕ್ರೋಶ… ಸುಟ್ಟಿರೋದು ನನ್ನ ಮನೆ, ಡಿಕೆಶಿಯದ್ದಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts