ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ, ಕಾವಲ್ಭೈರಸಂದ್ರ ಗಲಭೆ ಪ್ರಕರಣದ ಪ್ರಮುಖ ರೂವಾರಿ ಎನ್ನಲಾದ ವಾಜಿದ್ನನ್ನು ಬಂಧನಕ್ಕೆ ಸುಳಿವು ಕೊಟ್ಟದ್ದು ಮೊಬೈಲ್ ರಿಂಗ್ ಟೋನ್!
ಆರೋಪಿ ವಾಜೀದ್ನನ್ನು ಬಂಧಿಸಲು ಮಂಗಳವಾರ ಆತನ ಮನೆಗೆ ಸಿಸಿಬಿ ಪೊಲೀಸರು ಹೋಗಿದ್ದರು. ಆ ವೇಳೆ ಮನೆಯಲ್ಲಿ ಯಾರೂ ಇಲ್ಲ ಎಂಬಂತೆ ಬಿಂಬಿಸಲು ಹೊರಗಡೆಯಿಂದ ಆರೋಪಿ ಬೀಗ ಹಾಕಿದ್ದ. ಮೊದಲು ಸುಮ್ಮನಾದ ಅಧಿಕಾರಿಗಳು, ಅನುಮಾನದ ಮೇರೆಗೆ ಆತನ ಮೊಬೈಲ್ಗೆ ಕರೆ ಮಾಡಿದಾಗ ಮನೆಯೊಳಗೆ ಮೊಬೈಲ್ ರಿಂಗ್ ಆಗುವುದು ಕೇಳಿಸಿತ್ತು. ಬಾಗಿಲು ತೆಗೆಯದಿದ್ದರೆ, ಬಾಗಿಲು ಒಡೆಯುವುದಾಗಿ ಪೊಲೀಸರು ಎಚ್ಚರಿಸಿದ್ದರು. ಆತಂಕಗೊಂಡ ವಾಜೀದ್ ಬಾಗಿಲು ತೆಗೆದಿದ್ದಾನೆ ಎನ್ನಲಾಗಿದೆ. ವಾಜೀದ್ನನ್ನು ಬಂಧಿಸಿದ ಬೆನ್ನಲ್ಲೇ ರಹಸ್ಯ ಸ್ಥಳದಲ್ಲಿ ಅವಿತುಕೊಂಡಿದ್ದ ಆತನ ನಾಲ್ವರು ಸಹಚರರನ್ನು ಬುಧವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿರಿ ಆರೋಪಿ ನವೀನ್ನನ್ನು ಗಲಭೆಕೋರರಿಂದ ಬಚಾವ್ ಮಾಡಿದ್ದೇ ಅಖಂಡ ಶ್ರೀನಿವಾಸ ಮೂರ್ತಿ!
ಸಿಸಿಬಿ ಬಲೆಗೆ ಬಿದ್ದಿದ್ದ ವಾಜೀದ್ನನ್ನು ತೀವ್ರ ವಿಚಾರಣೆ ನಡೆಸಿದಾಗ ತನ್ನ ಸಹಚರರ ಬಗ್ಗೆ ಈತ ಸುಳಿವು ನೀಡಿದ್ದ. ಈ ಆಧಾರದ ಮೇಲೆ ನಗರದ ರಹಸ್ಯ ಸ್ಥಳವೊಂದರಲ್ಲಿ ಅಡಗಿ ಕುಳಿತಿದ್ದ ತೌಸಿಫ್, ಫಾಜಿಲ್, ಅಫ್ಜಲ್ ಹಾಗೂ ಪಾಷಾ ಎಂಬುವವರನ್ನು ಪತ್ತೆಹಚ್ಚಿದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಸಿಬಿಯ ಒಂದು ತಂಡ ವಾಜಿದ್ನನ್ನು ವಿಚಾರಣೆ ನಡೆಸಿ ಗಲಭೆಗೆ ಸಂಬಂಧಿಸಿದ ಮಹತ್ವದ ಮಾಹಿತಿ ಕಲೆ ಹಾಕುತ್ತಿದೆ. ವಿಚಾರಣೆ ವೇಳೆ ಗಲಭೆಯಲ್ಲಿ ಭಾಗಿಯಾದ ಒಟ್ಟು 10 ಪ್ರಮುಖ ಆರೋಪಿಗಳ ವಿವರಗಳನ್ನು ಈತ ನೀಡಿದ್ದ. ಈ ಪೈಕಿ ನಾಲ್ವರನ್ನು ಬಂಧಿಸಲಾಗಿದ್ದು, ಉಳಿದ 6 ಮಂದಿ ಆರೋಪಿಗಳಿಗಾಗಿ ಸಿಸಿಬಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ವಾಜೀದ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಬಂಧಿತ ನಾಲ್ವರು ಆರೋಪಿಗಳು ನಗರದ ವಿವಿಧೆಡೆಯಿಂದ ಗಲಭೆ ನಡೆಸಲು ಹಲವು ಜನರನ್ನು ಕರೆ ತಂದಿದ್ದರು. ಒಂದೇ ಸಮುದಾಯದ ನೂರಾರು ಜನರನ್ನು ಸಂಪರ್ಕಿಸಿ ಡಿಜೆ ಹಳ್ಳಿ, ಕೆಜಿ ಹಳ್ಳಿ, ಕಾವಲ್ಭೈರಸದಂದ್ರದ ಬಳಿ ಬರುವಂತೆ ಸೂಚಿಸಿದ್ದರು. ಗಲಭೆಯಲ್ಲಿ ಭಾಗಿಯಾದರೆ ಆಥಿರ್ಕ ನೆರವು ನೀಡಿ, ಪೊಲೀಸರಿಂದ ಬಂಧನಕ್ಕೊಳಗಾದರೆ ಜಾಮೀನು ಕೊಡಿಸುವುದಾಗಿ ಇವರಿಗೆ ಭರವಸೆ ನೀಡಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಕಾಂಗ್ರೆಸ್ ವಿರುದ್ಧ ಅಖಂಡ ಶ್ರೀನಿವಾಸ್ ಮೂರ್ತಿ ಆಕ್ರೋಶ… ಸುಟ್ಟಿರೋದು ನನ್ನ ಮನೆ, ಡಿಕೆಶಿಯದ್ದಲ್ಲ!
https://app.bitly.com/Bk52bwjriNH/bitlinks/31VzNc0?offset=60