ಬೆಂಗಳೂರು: ಆಕೆ ವಿವಾಹಿತೆ, ಆದರೆ ಹತ್ತು ವರ್ಷಗಳ ಬಳಿಕ ವಿಚ್ಛೇದನ ಪಡೆದ ಅವಳು ಇಬ್ಬಿಬ್ಬರ ಜತೆ ಲಿವಿಂಗ್ ಟುಗೆದರ್ನಲ್ಲಿದ್ದ ಪ್ರಕರಣ ಒಂದು ಎಸ್ಎಂಎಸ್ನಿಂದಾಗಿ ಬಟಾಬಯಲಾಗಿದೆ. ಹಲ್ಲೆ ಹಾಗೂ ಕೊಲೆಯತ್ನ ಪ್ರಕರಣವನ್ನು ಭೇದಿಸಿದ ಪೊಲೀಸರಿಂದಾಗಿ ಆಕೆಯ ಅಸಲಿಯತ್ತು ಬಹಿರಂಗಗೊಂಡಿದೆ.
ಈ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಚಂದ್ರಾ ಲೇಔಟ್ ನಿವಾಸಿ ಅರುಣ್ ನಾಯ್ಡು, ಆರ್.ಆರ್. ನಗರದ ರೌಡಿ ಕಾರ್ತಿಕ್ ಅಲಿಯಾಸ್ ಅರ್ನಾಲ್ಡ್, ಸಹಚರರಾದ ಯಶವಂತ್, ವಿಶಾಲ್ ಮತ್ತು ಸಂಜಯ್ ಎಂಬವರನ್ನು ಬಂಧಿಸಿದ್ದಾರೆ. ರಿಯಲ್ ಎಸ್ಟೇಟ್ ಏಜೆಂಟ್ ಶ್ರೀಕಾಂತ್ ನೀಡಿದ್ದ ದೂರಿನ ಮೇರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಇತ್ತೀಚಿಗೆ ನಾಗರಬಾವಿಯ ತನ್ನ ಪ್ರೇಯಸಿಗೆ ಮೆಸೇಜ್ ಮಾಡಿದ ಎಂದು ಶ್ರೀಕಾಂತ್ನನ್ನು ಆರೋಪಿಗಳು ಅಪಹರಿಸಿ ಹಲ್ಲೆ ನಡೆಸಿದ್ದರು. ಈ ಬಗ್ಗೆ ಶ್ರೀಕಾಂತ್ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಸಿಸಿಬಿ ಎಸಿಪಿ ಎಚ್.ಎನ್. ಧಮೇಂದ್ರಯ್ಯ ನೇತೃತ್ವದ ತಂಡ, ಮೊಬೈಲ್ಫೋನ್ ಕರೆಗಳ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಪ್ರಕರಣದ ಕೇಂದ್ರ ಬಿಂದುವಾಗಿರುವ ಚಂದ್ರಾ ಬಡಾವಣೆಯ ಮಹಿಳೆ 14 ವರ್ಷಗಳ ಹಿಂದೆ ಲೋಕೇಶ್ ಎಂಬಾತನನ್ನು ಮದುವೆಯಾಗಿದ್ದು, ಈ ದಂಪತಿಗೆ ಒಬ್ಬ ಮಗನಿದ್ದಾನೆ. ಆದರೆ 10 ವರ್ಷಗಳ ಹಿಂದೆ ಲೋಕೇಶ್ಗೆ ವಿಚ್ಛೇದನ ನೀಡಿದ ಮಹಿಳೆ, ರಿಯಲ್ ಎಸ್ಟೇಟ್ ಏಜೆಂಟ್ ಶ್ರೀಕಾಂತ್ ಜತೆ ಸ್ನೇಹ ಬೆಳೆಸಿ ಲಿವಿಂಗ್ ಟುಗೆದರ್ನಲ್ಲಿದ್ದಳು.
ಮೂರು ವರ್ಷಗಳ ಹಿಂದೆ ಆತನಿಂದಲೂ ದೂರವಾಗಿ ಅರುಣ್ ನಾಯ್ಡುವಿನ ಸ್ನೇಹ ಬೆಳೆಸಿದ್ದಳು. ಆದರೆ ಶ್ರೀಕಾಂತ್ ಇತ್ತೀಚಿಗೆ ಮಾಜಿ ಗೆಳತಿಗೆ ವಾಟ್ಸ್ಆ್ಯಪ್ನಲ್ಲಿ ಮೇಸೆಜ್ ಮಾಡಿ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಿದ್ದ. ಅದಕ್ಕೆ ಈಕೆ ಆಕ್ಷೇಪ ವ್ಯಕ್ತಪಡಿಸಿದ್ದಳು. ಆದರೂ ಶ್ರೀಕಾಂತ್ ಮೆಸೇಜ್ ಮಾಡುತ್ತಿದ್ದ. ಇದು ಅರುಣ್ಗೆ ತಿಳಿದು ಶ್ರೀಕಾಂತ್ನನ್ನು ಕೊಲೆ ಮಾಡಲು ನಿರ್ಧರಿಸಿದ್ದ.
ಅದಕ್ಕಾಗಿ ಅರುಣ್ ರೌಡಿ ಕಾರ್ತಿಕ್ ಸಹಾಯ ಪಡೆದಿದ್ದ. ನಾಗರಬಾವಿ ಸಮೀಪ ಶ್ರೀಕಾಂತ್ನನ್ನು ಅಪಹರಿಸಿದ ಆರೋಪಿಗಳು, ಕೆಂಗೇರಿ ಸಮೀಪದ ಗ್ಯಾರೇಜ್ಗೆ ಕರೆದೊಯ್ದು ಕೂಡಿಹಾಕಿ ಥಳಿಸಿದ್ದರು. ಅರುಣ್ ಕಾಲಿಗೆ ಬಿದ್ದ ಶ್ರೀಕಾಂತ್ನನ್ನು ಬಿಟ್ಟು ಕಳುಹಿಸಿದ್ದರು. ಬಳಿಕ ಈ ಸಂಬಂಧ ಚಂದ್ರಾ ಲೇಔಟ್ ಠಾಣೆಯಲ್ಲಿ ಶ್ರೀಕಾಂತ್ ದೂರು ಸಲ್ಲಿಸಿದ್ದ. ಸಿಸಿಬಿಗೆ ಪ್ರಕರಣ ವರ್ಗಾವಣೆ ಆಗಿದ್ದು, ಬಳಿಕ ಕಾರ್ಯಾಚರಣೆಯಲ್ಲಿ ಆರೋಪಿಗಳ ಬಂಧನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಮ್ಗೋಪಾಲ್ ವರ್ಮಾ ಜತೆ ಅಂಡರ್ವರ್ಲ್ಡ್ನಲ್ಲಿ ಉಪೇಂದ್ರ; ಯಾರದು ‘R’?