More

    ಲಿಂಗಾಯತರಿಗೆ ಅನ್ಯಾಯ ಮಾಡಿದ್ದೆ ಕಾಂಗ್ರೆಸ್ – ಆರ್.ಎಸ್.ಪಾಟೀಲ ಆರೋಪ

    ವಿಜಯಪುರ: ಲಿಂಗಾಯತರಿಗೆ ಬಿಜೆಪಿಯವರು ಅನ್ಯಾಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಟೀಕೆ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್‌ನವರು ಆತ್ಮಾಲೋಕನ ಮಾಡಿಕೊಳ್ಳಲಿ. ಯಾರು ಲಿಂಗಾಯತರಿಗೆ ಅನ್ಯಾಯ ಮಾಡಿದ್ದಾರೆಂದು. 50 ವರ್ಷ ಆಳಿದ ಕಾಂಗ್ರೆಸ್ ಎಷ್ಟು ಲಿಂಗಾಯತರಿಗೆ ಮುಖ್ಯಮಂತ್ರಿ ಮಾಡಿದೆ ಎಂದು ಹೇಳಲಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೊಚಬಾಳ ಹೇಳಿದರು.

    ಶನಿವಾರ ಬಿಜೆಪಿ ಚುನಾವಣಾ ಕಚೇರಿ ಉದ್ಘಾಟಿಸಿ ಅವರು ಮಾತನಾಡಿ, ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾಗಿದ್ದಾಗ ಅವರನ್ನು ಖರ್ಚಿಯಿಂದ ಕೆಳಗಿಳಿಸಿದ ರೀತಿಯನ್ನೊಮ್ಮೆ ಹಿಂತಿರುಗಿ ನೋಡಿದರೆ ಲಿಂಗಾಯತರಿಗೆ ಕಾಂಗ್ರೆಸ್ ಏನು ಆದ್ಯತೆ ಕೊಟ್ಟಿದೆ ಎಂಬುದು ಅರಿಯುತ್ತದೆ ಎಂದರು.

    ಈಗ ರಾಹುಲ್ ಗಾಂಧಿಯವರು ಕೂಡಲಸಂಗಮಕ್ಕೆ ಬರುತ್ತಿದ್ದಾರೆ. ಈಗ ಲಿಂಗಾಯತರ ಮೇಲೆ ಬಹಳಷ್ಟು ಪ್ರೀತಿ ತೋರಿಸುತ್ತಿದ್ದಾರೆ. ನಮ್ಮ ಸರ್ಕಾರ ಬಹುದಿನದ ದಲಿತರ ಬೇಡಿಕೆಯಂತೆ ಒಳಮೀಸಲಾತಿ ನೀಡಿದ್ದೇವೆ. ಲಿಂಗಾಯತರಿಗೆ ಮೀಸಲಾತಿ ನೀಡಿದ್ದೇವೆ ಎಂಬುದನ್ನು ಕಾಂಗ್ರೆಸ್ಸಿಗರು ಅರ್ಥ ಮಾಡಿಕೊಳ್ಳಬೇಕು ಎಂದರು.

    ಚುನಾವಣೆಗೆ ಹೋಗುವ ಮುನ್ನ ಲಿಂಗಾಯತ ಮುಖ್ಯಮಂತ್ರಿ ಘೋಷಣೆ ಮಾಡಲಿ ನೋಡೋಣ. ಹಿಂದೆ ಒಮ್ಮೆ ವೀರಶೈವ ಲಿಂಗಾಯತ ಒಡೆಯುವ ಕೆಲಸಕ್ಕೆ ಕೈ ಹಾಕಿದಿರಿ. ಇಂದು ಎಲ್ಲ ಸಮುದಾಯದಲ್ಲಿಯೂ ದ್ವೇಷ ಬಿತ್ತುವ ಕೆಲಸ ಮಾಡಿದ್ದೀರಿ ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.

    ಪ್ರಧಾನಿ ಮೋದಿ ಆಗಲಿ, ರಾಜ್ಯ ಸರ್ಕಾರವಾಗಲಿ 130 ಕೋಟಿ ಜನರ ಹಿತ ಕಾಪಾಡಲು ಅನೇಕ ಯೋಜನೆ ನೀಡಿದೆ. ಎಂದಿಗೂ ಧರ್ಮದ ಆಧಾರದ ಮೇಲೆ ಆಡಳಿತ ನಡೆಸಿಲ್ಲ. ಹೀಗಾಗಿ ಜನ ಬಿಜೆಪಿ ಪರ ಇದ್ದು, 130 ಸ್ಥಾನಗಳಿಸಿ ಮತ್ತೊಮ್ಮೆ ಅಧಿಕಾರಕ್ಕೆ ಬಿಜೆಪಿ ಬರುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts