ಹೈದರಾಬಾದ್: ಇತ್ತೀಚೆಗೆ ತಾನೆ ಟಾಲಿವುಡ್ನ ಸ್ಟೈಲಿಶ್ ಸ್ಟಾರ್ ನಟ ಅಲ್ಲು ಅರ್ಜುನ್ ಅವರ ಐಶಾರಾಮಿ ಕಾರನ್ನು ತಡೆದು ಹೈದರಾಬಾದ್ ಪೊಲೀಸರು ಕಾರಿನ ಕಿಟಕಿ ಗಾಜಿಗೆ ಅಳವಡಿಸಲಾಗಿದ್ದ ಟಿಂಟ್ ಅನ್ನು ಆನ್ ಸ್ಪಾಟ್ ತೆಗೆಸಿದ್ದರು. ಹಾಗೂ, ಅನಿಯಮಿತ ನಂಬರ್ ಪ್ಲೇಟ್ ಇದ್ದ ಕಾರಣ ನಟ ಅಲ್ಲು ಅರ್ಜುನ್ಗೆ 700 ರೂ. ದಂಡ ಸಹ ವಿಧಿಸಿದ್ದರು. ಇನ್ನು, ಶನಿವಾರ ಅಂದರೆ ಏಪ್ರಿಲ್ 2 ರಂದು ತೆಲುಗು ಚಿತ್ರರಂಗದ ಸ್ಟಾರ್ಗಳ ಮೆಚ್ಚಿನ ಹಾಗೂ ಸೆಲೆಬ್ರಿಟಿಗಳೇ ಹೆಚ್ಚು ಕಾಣಿಸಿಕೊಳ್ಳುವ ಖಾಸಗಿ 5 ಸ್ಟಾರ್ ಹೋಟೆಲ್ ಒಂದರ ಐಶಾರಾಮಿ ಪಬ್ ಮೇಲೆ ದಾಳಿ ಮಾಡಿದ್ದರು. ಪೊಲೀಸರು 148 ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದರು. ಅದರಲ್ಲಿ, ನಟ ಮೆಗಾ ಸ್ಟಾರ್ ಚಿರಂಜೀವಿ ಅವರ ತಮ್ಮನ ಮಗಳು ನಟಿ ನಿಹಾರಿಕಾ ಕೊನಿದೆಲಾ ಮತ್ತು ತೆಲುಗು ಬಿಗ್ ಬಾಸ್ 3 ವಿನ್ನರ್, ಗಾಯಕ ರಾಹುಲ್ ಸಿಪ್ಲಿಗಂಜ್ ಕೂಡಾ ಇದ್ದರು.
ಇನ್ನು, ಅಲ್ಲು ಅರ್ಜುನ್ಗೂ ಮುಂಚೆ ನಟ ಜೂ. ಎನ್.ಟಿ.ಆರ್, ನಟ ನಂದಮೂರಿ ಕಲ್ಯಾಣ್ ರಾಮ್, ನಟ ಮಂಚು ಮನೋಜ್ ಅವರ ಕಾರುಗಳಿಗೂ ದಂಡ ವಿಧಿಸಲಾಯ್ತು. ತೆಲುಗು ಚಿತ್ರರಂಗದ ಬೇರೆ ಬೇರೆ ಗಣ್ಯರ ಕಾರುಗಳನ್ನು ಹುಡುಕಿ–ಹುಡುಕಿ ದಂಡ ವಿಧಿಸುತ್ತಿದ್ದಾರೆ ಪೊಲೀಸರು. ಈಗ, ಸ್ಟಾರ್ ನಿರ್ದೇಶಕರೊಬ್ಬರ ಸರದಿ ಅನಿಸುತ್ತೆ. ಹೌದು, ನಿರ್ದೇಶಕ ತ್ರಿವಿಕ್ರಮ್ ಶ್ರಿನಿವಾಸ್ ಅವರ ಕಾರನ್ನು ತಡೆದ ಪೊಲೀಸರು ಕಾರಿನ ಕಿಟಕಿಗೆ ಅಳವಡಿಸಲಾಗಿದ್ದ ಟಿಂಟ್ ತೆಗೆಸಿದ್ದು, 700 ರೂ. ದಂಡ ವಿಧಿಸಿದ್ದಾರೆ. ತ್ರಿವಿಕ್ರಮ್ರ ಐಶಾರಾಮಿ ಕಾರನ್ನು ಪೊಲೀಸರು ತಪಾಸಣೆ ನಡೆಸುತ್ತಿರುವ ಫೋಟೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಎಸ್.ಎಸ್.ರಾಜಮೌಳಿ, ಕೆ. ರಾಘವೇಂದ್ರ ರಾವ್, ಪುರಿ ಜಗನ್ನಾಥ್ ಅವರ ಬಳಿಕ ನಿರ್ದೇಶಕ ತ್ರಿವಿಕ್ರಮ್ ಟಾಲಿವುಡ್ನ ಸ್ಟಾರ್ ನಿರ್ದೇಶಕರಲ್ಲಿ ಒಬ್ಬರು. ಜತೆಗೆ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಹಾಗೂ ಸತತ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕರ ಪಟ್ಟಿಯಲ್ಲಿ ತ್ರಿವಿಕ್ರಮ್ ಶ್ರಿನಿವಾಸ್ ಅವರ ಹೆಸರು ಒಂದು. ಇತ್ತೀಚೆಗೆ, ತಾನೆ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ‘ಭೀಮ್ಲ ನಾಯಕ್‘ ಸಿನಿಮಾಗೆ ಚಿತ್ರಕಥೆ ಬರೆದಿದ್ದ ತ್ರಿವಿಕ್ರಮ್ ಮುಂದೆ ನಟ ಮಹೇಶ್ ಬಾಬು ಜೊತೆ #SSMB28 ಎಂಬ ಸಿನಿಮಾ ಮಾಡಲು ರೆಡಿಯಾಗಿದ್ದಾರೆ. ಸದ್ಯ, ಹೈದರಾಬಾದ್ ಪೊಲೀಸರ ನಡೆ ಕಂಡರೆ ಟಾಲಿವುಡ್ ಮೇಲೆ ಹೈದರಾಬಾದ್ ಪೊಲೀಸರ ಕಣ್ಣು ಬಿದ್ದಂತಿದೆ ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.
ಡ್ರಗ್ಸ್ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಮೆಗಾ ಕುಟುಂಬದ ಕುಡಿ! ತಂದೆ ನಾಗಬಾಬು ಹೇಳಿದ್ದೇನು?
ತುಂಬು ಗರ್ಭಿಣಿ ಸಂಜನಾ ತಲೆ ಬೋಳಿಸಿಕೊಂಡಿದ್ದಾರೆ! ಆದರೆ, ನೆಟ್ಟಿಗರಿಗೆ ಏನೋ ಅನುಮಾನ?