More

    ದಿನೇಶ್ ಶೆಟ್ಟಿ ಕೊಟ್ಟಿಂಜ ಚೇತರಿಕೆ, ಆಸ್ಪತ್ರೆ ವೆಚ್ಚ ಭರಿಸಲು ಬೇಕಿದೆ ದಾನಿಗಳ ನೆರವು

    ಬಂಟ್ವಾಳ: ಫರಂಗಿಪೇಟೆಯ ತನ್ನ ಸ್ಟುಡಿಯೋದಲ್ಲಿ ದುಷ್ಕರ್ಮಿಗಳಿಂದ ಅ.28ರಂದು ರಾತ್ರಿ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಪುದು ಬಿಜೆಪಿ ಶಕ್ತಿಕೇಂದ್ರದ ಸಾಮಾಜಿಕ ಜಾಲಾತಾಣ ಸಂಚಾಲಕ ದಿನೇಶ್ ಶೆಟ್ಟಿ ಕೊಟ್ಟಿಂಜ ಚೇತರಿಸಿಕೊಳ್ಳುತ್ತಿದ್ದಾರೆ.

    ದುಷ್ಕರ್ಮಿಗಳ ಮಚ್ಚಿನೇಟಿಗೆ ತಲೆ ಹಾಗೂ ಹೊಟ್ಟೆಭಾಗ ಸಹಿತ ದೇಹ ತುಂಬೆಲ್ಲ ತೀವ್ರ ಗಾಯಗೊಂಡಿದ್ದ ದಿನೇಶ್ ಶೆಟ್ಟಿಯವರ ಕೈಯ ಕೊಂಬೆರಳು ತುಂಡರಿಸಲ್ಪಟ್ಟಿದೆ. ಈಗ ಆರೋಗ್ಯ ಸುಧಾರಿಸುತ್ತಿದ್ದು, ತುರ್ತು ಶಸ್ತ್ರಚಿಕಿತ್ಸೆಗಳನ್ನು ಪೂರೈಸಲಾಗಿದೆ. ಕೆಲಶಸ್ತ್ರಚಿಕಿತ್ಸೆಗಳು ಇನ್ನೂ ಬಾಕಿ ಇವೆ. ಮಂಗಳೂರಿನ ಖಾಸಗಿ ಆಸ್ಪತ್ರೆಯ ತುರ್ತುಚಿಕಿತ್ಸಾ ಘಟಕದಲ್ಲಿದ್ದ ಅವರನ್ನು ಗುರುವಾರ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ.

    ದಾನಿಗಳ ನೆರವು ನಿರೀಕ್ಷೆ: ದಿನೇಶ್ ಶೆಟ್ಟಿಯವರ ಆಸ್ಪತ್ರೆಯ ಬಿಲ್ ಈಗಾಗಲೇ ಏಳು ಲಕ್ಷ ರೂ. ಗಡಿ ದಾಟಿದೆ. ಇನ್ನೂ ಕೆಲವು ದಿನ ಆಸ್ಪತ್ರೆಯಲ್ಲಿ ಉಳಿಯಬೇಕಾಗಿದೆ. ಪೋಟೋಗ್ರಫಿ ವೃತ್ತಿ ನಂಬಿಕೊಂಡು ಅವರ ಕುಟುಂಬ ಜೀವನ ಸಾಗಿಸುತ್ತಿತ್ತು. ದೊಡ್ಡ ಮೊತ್ತದ ಆಸ್ಪತ್ರೆಯ ಬಿಲ್ ಪಾವತಿಸಲು ಸಹೃದಯ ದಾನಿಗಳ ನೆರವು ಬೇಕಾಗಿದೆ. ಆರ್ಥಿಕ ನೆರವು ನೀಡುವ ದಾನಿಗಳು, ದಿನೇಶ್ ಶೆಟ್ಟಿ, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್. ಖಾತೆ ಸಂಖ್ಯೆ: 09662010001020, ಐಎಫ್‌ಎಸ್‌ಸಿ ಕೋಡ್ ಣ್ಕಆಇ0100966, ಗೂಗಲ್ ಪೇ ಸಂಖ್ಯೆ 9449591780ಗೆ ಜಮಾ ಮಾಡಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts