More

    ಶ್ರದ್ಧೆ, ನಿಷ್ಠಗೆ ಗೌರವ ನಿಶ್ಚಿತ

    ಹುಕ್ಕೇರಿ: ಶ್ರದ್ಧೆ ಮತ್ತು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದಲ್ಲಿ ಸಮಾಜ ಮತ್ತು ಸರ್ಕಾರ ಗಮನಿಸಿ, ಗೌರವಿಸುತ್ತದೆ ಎಂಬುದಕ್ಕೆ ಹುಕ್ಕೇರಿ ಪೊಲೀಸ್ ಠಾಣೆ ಪಿಎಸ್‌ಐ ಶಿವಾನಂದ ಗುಡಗನಟ್ಟಿ ನಿದರ್ಶನವಾಗಿದ್ದಾರೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದ್ದಾರೆ.

    ಸೋಮವಾರ ತಾಲೂಕಿನ ಸಂಕೇಶ್ವರದಲ್ಲಿ ಇತ್ತೀಚೆಗೆ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾದ ಹುಕ್ಕೇರಿ ಪಿಎಸ್‌ಐ ಶಿವಾನಂದ ಗುಡಗನಟ್ಟಿ ಅವರನ್ನು ಸತ್ಕರಿಸಿ ಮಾತನಾಡಿದರು.

    ಗೋಕಾಕ ತಾಲೂಕಿನ ಗೊಡಚಿನಮುಲ್ಕಿಯ ಶಿವಾನಂದ ಬೆಂಗಳೂರಿನ ಹೃದಯ ಭಾಗವಾದ ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ದಕ್ಷತೆ ಹಾಗೂ ಪ್ರಮಾಣಿಕ ಸೇವೆ ಗುರುತಿಸಿ ಸರ್ಕಾರ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸ ತಂದಿದೆ.

    ಇದೀಗ ಅವರು ಹುಕ್ಕೇರಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಸ್ನೇಹಪರ ವ್ಯಕ್ತಿತ್ವ ಹಾಗೂ ದೃಢ ನಿರ್ಧಾರಗಳು ನಮಗೂ ಮೆಚ್ಚುಗೆಯಾಗಿವೆ. ಅವರಿಗೆ ಇನ್ನಷ್ಟು ಪ್ರಶಸ್ತಿಗಳು ಸಿಗುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು. ಸಂಕೇಶ್ವರ ಪಿಎಸ್‌ಐ ಗಣಪತಿ ಕೊಂಗನೊಳ್ಳಿ, ಹರಗಾಪುರದ ಪವನ ಪಾಟೀಲ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts