ಭಾರತೀಯ ಸಿನಿಮಾರಂಗದಲ್ಲಿ ತಮ್ಮದೇ ಛಾಪು ಮೂಡಿಸಿ ಲೇಡಿ ಸೂಪರ್ಸ್ಟಾರ್ ಎಂದೇ ಗುರುತಿಸಿಕೊಂಡಿದ್ದ ನಟಿ ಶ್ರೀದೇವಿ, 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಹುತೇಕ ಸ್ಟಾರ್ ಹೀರೋಗಳ ಜತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಆದರೆ, ಸಂಜಯ್ ದತ್ ಜತೆ ನಟಿಸಲು ಮಾತ್ರ ಶ್ರೀದೇವಿಗೆ ತುಂಬ ಭಯ ಕಾಡಿತ್ತಂತೆ. ಆ ಒಂದು ಘಟನೆಯನ್ನು ಸಂಜಯ್ ದತ್ ಇತ್ತೀಚೆಗಷ್ಟೇ ನೆನಪು ಮಾಡಿಕೊಂಡಿದ್ದರು.
ಇದನ್ನೂ ಓದಿ: ನಾನಾವತಿ ಆಸ್ಪತ್ರೆಯಿಂದ ತಮ್ಮ ಚಿತ್ರ ಹಂಚಿಕೊಂಡ ಅಮಿತಾಭ್ ಬಚ್ಚನ್
ಹೌದು, 1983ರ ಸುಮಾರಿಗೆ ಜಿತೇಂದ್ರ ಜತೆ ಹಿಮ್ಮತ್ವಾಲಾ ಸಿನಿಮಾದಲ್ಲಿ ಶ್ರೀದೇವಿ ನಾಯಕಿ. ಆ ಚಿತ್ರದ ಶೂಟಿಂಗ್ ನೋಡಲು ಸಂಜಯ್ ದತ್ ಸಹ ಆಗಮಿಸಿದ್ದರಂತೆ. ಅಷ್ಟೇ ಅಲ್ಲ ಶೂಟಿಂಗ್ ಮುಗಿಯುತ್ತಿದ್ದಂತೆ, ಎಣ್ಣೆ ಮತ್ತಿನಲ್ಲಿ ನೇರವಾಗಿ ಶ್ರೀದೇವಿ ಕೋಣೆಯ ಬಾಗಿಲು ತಟ್ಟಿ ಅವರನ್ನು ಎಬ್ಬಿಸಿದ್ದರಂತೆ. ಕೋಣೆ ಒಳಗೆ ಬರಲು ಪ್ರಯತ್ನಿಸುತ್ತಿದ್ದಂತೆ ಕೋಣೆಯ ಬಾಗಿಲು ಹಾಕಿದ್ದರು ಶ್ರೀದೇವಿ.
ಬಳಿಕ ಸುಮಾರು ವರ್ಷಗಳ ಬಳಿಕ ಇದೇ ಘಟನೆಯನ್ನು ನೆನಪು ಮಾಡಿಕೊಂಡ ಸಂಜಯ್, ಆವತ್ತು ಕೋಣೆಯಲ್ಲಿ ನನ್ನ ವರ್ತನೆ ಹೇಗಿತ್ತು ಎಂಬುದು ನನಗೇ ಗೊತ್ತಿಲ್ಲ. ಅದರ ನೆನಪೂ ಇಲ್ಲ ಎಂದು ಹೇಳಿಕೊಂಡಿದ್ದರು. ಅಷ್ಟೇ ಅಲ್ಲ ಈ ಘಟನೆ ಆದ ಬಳಿಕ ಸಂಜಯ್ ದತ್ ಜತೆ ಸಿನಿಮಾ ಮಾಡುವುದನ್ನೇ ಕೈ ಬಿಟ್ಟಿದ್ದರಂತೆ ಶ್ರೀದೇವಿ.
ಇದನ್ನೂ ಓದಿ: ಹಿರಿಯ ನಟ ಅಮಿತಾಭ್ ಬಚ್ಚನ್ಗೆ ಕೊವಿಡ್-19 ಸೋಂಕು; ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು
ಕೊನೆಗೆ ಆ ಘಟನೆ ನಡೆದು 10 ವರ್ಷಗಳ ಬಳಿಕ 1993ರಲ್ಲಿ ಗುಮ್ರಾ ಚಿತ್ರದಲ್ಲಿ ಸಂಜಯ್ ಮತ್ತು ಶ್ರೀದೇವಿ ನಟಿಸಿದರಾದರೂ, ಚಿತ್ರ ಪ್ಲಾಪ್ ಪಟ್ಟಿ ಸೇರಿಕೊಂಡಿತು. ಹೀಗೆ ಅಂದಿನ ಒಂದಷ್ಟು ಘಟನೆಗಳನ್ನು ಸಂಜಯ್ ದತ್ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು. (ಏಜೆನ್ಸೀಸ್)
VIDEO| ಹೇಮಾ ಮಾಲಿನಿಗೂ ಕರೊನಾ!?; ಮಗಳು ಇಶಾ ಕೊಟ್ಟ ಸ್ಪಷ್ಟನೆ ಹೀಗಿದೆ…