More

    3 ದಿನ ಕಾದರೂ ಟಿಕೆಟ್ ಸಿಕ್ಕಿಲ್ಲ! ಧೋನಿಯನ್ನು ನೋಡಲೇಬೇಕೆಂದು ಕಣ್ಣೀರು ಹಾಕಿದ ಅಭಿಮಾನಿ…

    ಬೆಂಗಳೂರು: ಐಪಿಎಲ್ ಕ್ರೇಝ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನೋಡ ನೋಡುತ್ತಿದ್ದಂತೆ ಐಪಿಎಲ್ ಟಿಕೆಟ್​ಗಳು ಬಿಕರಿಯಾಗುತ್ತವೆ. ಇದಕ್ಕೆ ತಾಜಾ ಉದಾಹರಣೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಭಾಗದ ದೃಶ್ಯಗಳು. ನಾಳೆ ಬೆಂಗಳೂರಿನಲ್ಲಿ ಆರ್​ಸಿಬಿ ಹಾಗೂ ಸಿಎಸ್​ಕೆ ತಂಡಗಳ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಕಾರಣದಿಂದ ಎರಡೂ ತಂಡಗಳ ಕ್ರಿಕೆಟ್ ಪ್ರೇಮಿಗಳು ಟಿಕೆಟ್​ಗಾಗಿ ಮುಗಿಬಿದ್ದಿದ್ದಾರೆ.

    ಲಾಠಿ ಬೀಸಿದ ಪೊಲೀಸರು!

    ಚಿನ್ನಸ್ವಾಮಿ ಕ್ರೀಡಾಂಗಣದ ಹೊರಭಾಗದಲ್ಲಿ ನಾಳಿನ ಪಂದ್ಯದ ಟಿಕೆಟ್​ಗಾಗಿ ಮುಗಿಬಿದ್ದಿರುವ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ ಘಟನೆ ನಡೆದಿದೆ. ಕ್ಷಣಾರ್ಧದಲ್ಲಿ ಟಿಕೆಟ್ ಕಾಲಿಯಾಗುತ್ತಿದ್ದಂತೆ, ಟಿಕೆಟ್ ಕೌಂಟರ್​ನಲ್ಲಿ ಸೋಲ್ಡ್ ಔಟ್ ಬೋರ್ಡ್ ಹಾಕಲಾಗಿತ್ತು. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸೋಲ್ಡ್ ಔಟ್ ಬೋರ್ಡ್‍ನ್ನು ಅಭಿಮಾನಿಗಳು ಕಿತ್ತು ಹಾಕುತ್ತಿದ್ದಂತೆ, ಆಕ್ರೋಶಿತರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಬೀಸಿದ್ದಾರೆ.

    ಇದನ್ನೂ ಓದಿ: 19 ವರ್ಷದ ಬಿ.ಟೆಕ್ ವಿದ್ಯಾರ್ಥಿನಿಗೆ ಕಾಲೇಜು ಕೊಠಡಿಯಲ್ಲೇ ಗರ್ಭಪಾತ!

    ಧೋನಿ ಅಭಿಮಾನಿ ಕಣ್ಣೀರು!

    ಟೀಂ ಇಂಡಿಯಾ ಮಾಜಿ ನಾಯಕ ಧೋನಿಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಒಂದು ಬಾರಿಯಾದರೂ ಧೋನಿಯನ್ನು ಕಣ್ತುಂಬಿಕೊಳ್ಳಬೇಕೆಂದು ಹಂಬಲಿಸುತ್ತಿರುತ್ತಾರೆ. ಅಂತೆಯೇ ನಾಳಿನ ಪಂದ್ಯದಲ್ಲಿ ಸಿಎಸ್​ಕೆ ನಾಯಕನನ್ನು ನೋಡಬೇಕೆಂದು ಅಭಿಮಾನಿಯೊಬ್ಬ ದೂರದ ಗಂಗಾವತಿಯಿಂದ ಬಂದಿದ್ದಾನೆ. ಆದರೆ ಟಿಕೆಟ್ ಸಿಗದೆ ನಿರಾಸೆ ಅನುಭವಿಸುವಂತಾಗಿದೆ.

    ನಾವು ಬಡವರು, ಟಿಕೆಟ್​ಗಾಗಿ 10 ಸಾವಿರ ರೂ. ಎಲ್ಲಿಂದ ತರಲಿ?

    ಆದರೆ ಮೂರು ದಿನ ಕಾದರೂ ನಾಳಿನ ಪಂದ್ಯದ ಟಿಕೆಟ್ ಮಾತ್ರ ಸಿಕ್ಕಿಲ್ಲ. ನಾನು ಧೋನಿಯ ಅಪ್ಪಟ ಅಭಿಮಾನಿ, ಅವರನ್ನು ನೋಡಬೇಕೆಂದು ಬಂದಿದ್ದೇನೆ. ಇಲ್ಲಿ ವಿಚಾರಿಸಿದರೆ ಟಿಕೆಟ್ ಸೋಲ್ಡ್​ಔಟ್ ಎನ್ನುತ್ತಿದ್ದಾರೆ. ನಾವು ಬಡವರು, ಬ್ಲಾಕ್​​ನಲ್ಲಿ 10 ಸಾವಿರ ರೂ. ಎಲ್ಲ ನೀಡಿ ಟಿಕೆಟ್ ಪಡೆಯುವಷ್ಟು ಹಣವಂತರಲ್ಲ ಎನ್ನುತ್ತಾ ಧೋನಿ ಅಭಿಮಾನಿಯೊಬ್ಬ ಕಣ್ಣೀರು ಹಾಕಿದ್ದಾನೆ.

    ಇದನ್ನೂ ಓದಿ: ಪೊಲೀಸರಿಗೆ ಗುಡ್​ ನ್ಯೂಸ್; ಚುನಾವಣೆ ಕರ್ತವ್ಯ ಭತ್ಯೆ ಹೆಚ್ಚಳ

    ಮೈಮೇಲೆ ಧೋನಿ ಟ್ಯಾಟೂ…

    ಗಂಗಾವತಿಯಿಂದ ಬಂದಿದ್ದ ಅಭಿಮಾನಿ, ದೇಹದ ಮೇಲೆ ಧೋನಿ ಟ್ಯಾಟೊ ಹಾಕಿಸಿಕೊಂಡಿದ್ದಾನೆ. ಮೈಮೇಲೆ ಧೋನಿ, ಸಾಕ್ಷಿ, ಝೀವಾ ಎಂದು ಹೆಸರು ಬರೆಸಿಕೊಂಡು ಧೋನಿ ಮೇಲಿರುವ ಅಭಿಮಾನ ಮೆರೆದಿದ್ದಾನೆ.

    ಇದನ್ನೂ ಓದಿ: ಮರ್ಯಾದಾ ಹತ್ಯೆ; ಪ್ರೀತಿಯ ವಿಷಯ ತಿಳಿದು ಹೆಣ್ಣು ಮಕ್ಕಳಿಬ್ಬರನ್ನು ಕೊಂದೇ ಬಿಟ್ಟ ದಂಪತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts