ಧಾರವಾಡ: ಮನೆಯೊಂದರ ಒಳಗಡೆಯಿಂದ ನೀರಿನೊಂದಿಗೆ ರಕ್ತ ಹರಿದು ಬರುವುದನ್ನು ನೋಡಿ ಜನರು ಹೌಹಾರಿದ ಘಟನೆ ಧಾರವಾಡದ ಮಣಕಿಲ್ಲಾ ಹರಿಮಂದಿರ ಪ್ರದೇಶದಲ್ಲಿ ಭಾನುವಾರ ನಡೆದಿದೆ.
ಹತ್ತಕ್ಕೂ ಹೆಚ್ಚು ಮನೆಗಳಿಂದ ರಕ್ತ ಮಿಶ್ರಿತ ನೀರು ಹರಿದು ಬರುತ್ತಿದೆ. ಡ್ರೈನೇಜ್ ಉಕ್ಕಿ ಹರಿಯುತ್ತಿರುವ ಕಾರಣ ಡ್ರೈನೇಜ್ ನೀರಿನಲ್ಲಿ ಸೇರಿದ್ದ ರಕ್ತವೂ ಹರಿದು ಹೊರ ಬರುತ್ತಿದ್ದು, ಬೆಳ್ಳಂಬೆಳಗ್ಗೆ ಇದನ್ನು ನೋಡಿದ ಜನರು ಹೆದರಿದ್ದಾರೆ.
ಇದನ್ನೂ ಓದಿ: ನಾನು- ರಾಗಿಣಿ ಕ್ಲೋಸ್ ಕ್ಲೋಸ್: ಅರೆಸ್ಟ್ ಮಾಡಿ ಪ್ಲೀಸ್… ಸಿಸಿಬಿ ಕಚೇರಿಗೆ ಯುವಕನ ದೌಡು!
ಅಂದಹಾಗೆ ರಕ್ತ ಪ್ರಾಣಿಗಳ ಮಾಂಸದ ಮಾರ್ಕೆಟ್ನಿಂದ ಡ್ರೈನೇಜ್ಗೆ ಸೇರುತ್ತಿದೆ. ಇದೀಗ ಅದೇ ರಕ್ತ ಡ್ರೈನೇಜ್ ಓವರ್ ಫ್ಲೋದಿಂದ ಮನೆಗಳತ್ತ ಬರುತ್ತಿರುವುದರಿಂದ ಮಹಾನಗರ ಪಾಲಿಕೆ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. (ದಿಗ್ವಿಜಯ ನ್ಯೂಸ್)
ಕಾರಣ ಏನೇ ಇರಬಹುದು ನೈತಿಕ ಪೊಲೀಸ್ ಗಿರಿ ಹಕ್ಕು ಯಾರಿಗೂ ಇಲ್ಲ: ಸಂಯುಕ್ತಾ ಟ್ವೀಟ್ಗೆ ರಮ್ಯಾ ರೀಟ್ವೀಟ್!