More

    ಬೆಳ್ಳಂಬೆಳಗ್ಗೆ ಮನೆಯೊಳಗಿಂದ ರಕ್ತ ಹರಿದು ಬರುವುದನ್ನು ನೋಡಿ ಬೆಚ್ಚಿಬಿದ್ದ ಜನರು!

    ಧಾರವಾಡ: ಮನೆಯೊಂದರ ಒಳಗಡೆಯಿಂದ ನೀರಿನೊಂದಿಗೆ ರಕ್ತ ಹರಿದು ಬರುವುದನ್ನು ನೋಡಿ ಜನರು ಹೌಹಾರಿದ ಘಟನೆ ಧಾರವಾಡದ ಮಣಕಿಲ್ಲಾ ಹರಿಮಂದಿರ ಪ್ರದೇಶದಲ್ಲಿ ಭಾನುವಾರ ನಡೆದಿದೆ.

    ಹತ್ತಕ್ಕೂ ಹೆಚ್ಚು ಮನೆಗಳಿಂದ ರಕ್ತ ಮಿಶ್ರಿತ ನೀರು ಹರಿದು ಬರುತ್ತಿದೆ. ಡ್ರೈನೇಜ್ ಉಕ್ಕಿ ಹರಿಯುತ್ತಿರುವ ಕಾರಣ ಡ್ರೈನೇಜ್​ ನೀರಿನಲ್ಲಿ ಸೇರಿದ್ದ ರಕ್ತವೂ ಹರಿದು ಹೊರ ಬರುತ್ತಿದ್ದು, ಬೆಳ್ಳಂಬೆಳಗ್ಗೆ ಇದನ್ನು ನೋಡಿದ ಜನರು ಹೆದರಿದ್ದಾರೆ.

    ಇದನ್ನೂ ಓದಿ: ನಾನು- ರಾಗಿಣಿ ಕ್ಲೋಸ್‌ ಕ್ಲೋಸ್‌: ಅರೆಸ್ಟ್‌ ಮಾಡಿ ಪ್ಲೀಸ್‌… ಸಿಸಿಬಿ ಕಚೇರಿಗೆ ಯುವಕನ ದೌಡು!

    ಅಂದಹಾಗೆ ರಕ್ತ ಪ್ರಾಣಿಗಳ ಮಾಂಸದ ಮಾರ್ಕೆಟ್‌ನಿಂದ ಡ್ರೈನೇಜ್‌ಗೆ ಸೇರುತ್ತಿದೆ. ಇದೀಗ ಅದೇ ರಕ್ತ ಡ್ರೈನೇಜ್ ಓವರ್ ಫ್ಲೋ‌ದಿಂದ ಮನೆಗಳತ್ತ ಬರುತ್ತಿರುವುದರಿಂದ ಮಹಾನಗರ ಪಾಲಿಕೆ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. (ದಿಗ್ವಿಜಯ ನ್ಯೂಸ್​)

    ಕಾರಣ ಏನೇ ಇರಬಹುದು ನೈತಿಕ ಪೊಲೀಸ್​ ಗಿರಿ ಹಕ್ಕು ಯಾರಿಗೂ ಇಲ್ಲ: ಸಂಯುಕ್ತಾ ಟ್ವೀಟ್​ಗೆ ರಮ್ಯಾ ರೀಟ್ವೀಟ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts