More

    ಚಾಹಲ್-ಧನಶ್ರೀ ನಡುವೆ ಪ್ರೀತಿ ಹುಟ್ಟಲು ನೆರವಾಯಿತು ಲಾಕ್‌ಡೌನ್!

    ಮುಂಬೈ: ಟೀಮ್ ಇಂಡಿಯಾ ಮತ್ತು ಆರ್‌ಸಿಬಿ ತಂಡದ ಪ್ರಮುಖ ಸ್ಪಿನ್ನರ್ ಯಜುವೇಂದ್ರ ಚಾಹಲ್ ಐಪಿಎಲ್ ಟೂರ್ನಿಗಾಗಿ ಯುಎಇಗೆ ತೆರಳುವುದಕ್ಕೆ ಮುನ್ನ ಡ್ಯಾನ್ಸರ್, ಕೋರಿಯೋಗ್ರಾರ್, ಡಾಕ್ಟರ್ ಮತ್ತು ಯುಟ್ಯೂಬರ್ ಧನಶ್ರೀ ವರ್ಮ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು. ಇದೀಗ ಧನಶ್ರೀ ಅವರು ಚಾಹಲ್ ತಮಗೆ ಇಷ್ಟವಾಗಿದ್ದೇಕೆ, ತಮ್ಮಿಬ್ಬರಲ್ಲಿ ಪ್ರೀತಿ ಹುಟ್ಟಿದ್ದು ಯಾವಾಗ ಮತ್ತು ಮದುವೆ ಯಾವಾಗ ಎಂಬ ಬಗ್ಗೆ ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ.

    ಕಳೆದ ಏಪ್ರಿಲ್‌ನಲ್ಲಿ ಲಾಕ್‌ಡೌನ್ ವೇಳೆ ಗುರು-ಶಿಷ್ಯರಾಗಿ ತಮ್ಮಿಬ್ಬರ ಸಂಬಂಧ ಶುರುವಾದ ಬಗ್ಗೆ ಹೇಳಿಕೊಂಡಿರುವ 28 ವರ್ಷದ ಧನಶ್ರೀ, ‘ಚಾಹಲ್ ಅವರು ಯುಟ್ಯೂಬ್‌ನಲ್ಲಿ ನನ್ನ ಡ್ಯಾನ್ಸ್ ವಿಡಿಯೋಗಳನ್ನು ನೋಡಿದ್ದರು ಮತ್ತು ನನ್ನ ಕೋರಿಯೋಗ್ರಾಫಿ ಕೆಲಸಗಳ ಬಗ್ಗೆಯೂ ಅವರಿಗೆ ತಿಳಿದಿತ್ತು. ಲಾಕ್‌ಡೌನ್ ಸಮಯದಲ್ಲಿ ಕೆಲ ಹೊಸ ವಿಷಯಗಳನ್ನು ಕಲಿಯಲು ಚಾಹಲ್ ಮುಂದಾಗಿದ್ದರು. ಅದರಲ್ಲಿ ಡ್ಯಾನ್ಸ್ ಕೂಡ ಒಂದಾಗಿತ್ತು. ಹೀಗಾಗಿ ಅವರು ನನ್ನನ್ನು ಸಂಪರ್ಕಿಸಿದರು ಮತ್ತು ನನ್ನಿಂದ ಡ್ಯಾನ್ಸ್ ಕಲಿಯಲಾರಂಭಿಸಿದರು. ನಿಧಾನವಾಗಿ ನಾವು ಸ್ನೇಹಿತರಾದೆವು. ಮುಂದೆ ನಮ್ಮಿಬ್ಬರ ನಡುವೆ ಪ್ರೀತಿ ಹುಟ್ಟಿ ನಿಶ್ಚಿತಾರ್ಥದವರೆಗೂ ಬಂದಿತು’ ಎಂದು ವಿವರಿಸಿದ್ದಾರೆ.

    ಚಾಹಲ್-ಧನಶ್ರೀ ನಡುವೆ ಪ್ರೀತಿ ಹುಟ್ಟಲು ನೆರವಾಯಿತು ಲಾಕ್‌ಡೌನ್!

    ಕರೊನಾ ವೈರಸ್ ನಿಯಂತ್ರಣಕ್ಕೆ ಬಂದು ಪರಿಸ್ಥಿತಿ ಸುಧಾರಿಸಿದರೆ ಮುಂದಿನ ವರ್ಷ ವೈವಾಹಿಕ ಜೀವನಕ್ಕೆ ಕಾಲಿಡುವ ಯೋಜನೆ ತಮ್ಮದು ಎಂದು ಧನಶ್ರೀ ಹೇಳಿದ್ದಾರೆ. ಯಾಕೆಂದರೆ, ಆಪ್ತರು, ಬಂಧುಬಳಗದ ಎಲ್ಲರನ್ನೂ ಕರೆದು ಅದ್ದೂರಿಯಾಗಿಯೇ ಮದುವೆಯಾಗುವ ಯೋಜನೆ ಅವರದಾಗಿದೆ. ನಿಶ್ಚಿತಾರ್ಥವನ್ನು ಮಾತ್ರ ಅವರು ಸರಳವಾಗಿ ಮುಗಿಸಿದ್ದರು.

    ಇದನ್ನೂ ಓದಿ: ಧೋನಿಗೂ ಶೋಯಿಬ್​ ಮಲಿಕ್​ಗೂ ಸಾಕಷ್ಟು ಸಾಮ್ಯತೆಯಿದೆ ಎಂದ ಸಾನಿಯಾ ಮಿರ್ಜಾ..!

    ಲಾಕ್‌ಡೌನ್ ಸಮಯದಲ್ಲಿ ಸಾಕಷ್ಟು ಬಿಡುವು ಇದ್ದ ಕಾರಣದಿಂದಾಗಿ ಇಬ್ಬರಿಗೂ ಪರಸ್ಪರರ ಬಗ್ಗೆ ತಿಳಿದುಕೊಳ್ಳಲು ಮತ್ತು ಅರ್ಥಮಾಡಿಕೊಳ್ಳಲು ನೆರವಾಯಿತು ಎಂದು ಧನಶ್ರೀ ಹೇಳಿದ್ದಾರೆ. ‘ಯುಜಿ (ಚಾಹಲ್) ಅವರೊಬ್ಬ ಸರಳ ವ್ಯಕ್ತಿ, ಅತ್ಯಂತ ಸ್ನೇಹಜೀವಿ ಮತ್ತು ಸಂಪೂರ್ಣ ಕೌಟುಂಬಿಕ ವ್ಯಕ್ತಿ. ಅವರ ವಿನಯತೆ ನನ್ನನ್ನು ಸಂಪೂರ್ಣವಾಗಿ ಬೌಲ್ಡ್ ಮಾಡಿತು. ಅವರಂಥ ವ್ಯಕ್ತಿಯನ್ನೇ ನಾನು ಜೀವನ ಸಂಗಾತಿಯಾಗಿ ಪಡೆಯಲು ಬಯಸಿದ್ದೆ. ನಾವಿಬ್ಬರೂ ಮಹತ್ವಾಕಾಂಕ್ಷಿಗಳು ಮತ್ತು ಪರಸ್ಪರರ ವೃತ್ತಿಗೆ ಬೆಂಬಲ ನೀಡುತ್ತೇವೆ. ನಾವಿಬ್ಬರೂ ತಮಾಷೆಯನ್ನು ಇಷ್ಟಪಡುತ್ತೇವೆ. ಹೀಗಾಗಿ ನಮ್ಮಿಬ್ಬರ ಜೀವನದಲ್ಲಿ ಎಂದೂ ನೀರಸ ಕ್ಷಣಗಳು ಇರಲು ಸಾಧ್ಯವಿಲ್ಲ’ ಎಂದು ಧನಶ್ರೀ ಹೇಳಿದ್ದಾರೆ.

    ಎಂಎಸ್ ಧೋನಿ ತಮ್ಮ ಇಷ್ಟದ ಕ್ರಿಕೆಟಿಗರು. ಆದರೆ ಈ ಬಾರಿ ಐಪಿಎಲ್‌ನಲ್ಲಿ ಚಾಹಲ್ ಆಡುವ ಆರ್‌ಸಿಬಿ ತಂಡವನ್ನೇ ಬೆಂಬಲಿಸುತ್ತೇನೆ ಎಂದಿರುವ ಧನಶ್ರೀ, ಈಗ ತಮ್ಮದೇ ಡ್ಯಾನ್ಸ್ ಅಕಾಡೆಮಿಯಲ್ಲಿ ಬಿಜಿಯಾಗಿದ್ದಾರೆ. ದುಬೈನಲ್ಲಿದ್ದ ಕಾರಣ ಧನಶ್ರೀ ಅವರ ತಂದೆ ನಿಶ್ಚಿತಾರ್ಥಕ್ಕೆ ಹಾಜರಾಗಿರಲಿಲ್ಲ. ಆದರೆ ಈಗ ಚಾಹಲ್ ಅವರೂ ದುಬೈನಲ್ಲಿದ್ದು, ಭಾವಿ ಮಾವನನ್ನು ಭೇಟಿಯಾಗುವ ಸಾಧ್ಯತೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts