ನವದೆಹಲಿ: ಚಿತ್ರನಟಿ ಕಂಗನಾ ರಾಣಾವತ್ ಅವರನ್ನು ಚಂಡೀಗಢದಿಂದ ಮುಂಬೈಗೆ ಕರೆದೊಯ್ದ ಇಂಡಿಗೋಕ್ಕೆ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್(ಡಿಜಿಸಿಎ) ನೋಟಿಸ್ ಜಾರಿಮಾಡಿದೆ. ಕಂಗನಾ ಅವರು ಸೆಪ್ಟೆಂಬರ್ 9ರಂದು ಚಂಡೀಗಢದಿಂದ ಮುಂಬೈಗೆ ಇಂಡಿಗೋ 6ಇ 264 ವಿಮಾನದಲ್ಲಿ ಪ್ರಯಾಣಿಸಿದ್ದರು.
ಮುಂಬೈನ ಬಾಂದ್ರಾದಲ್ಲಿ ಅವರ ಬಂಗ್ಲೆಯನ್ನು ಬೃಹನ್ಮುಂಬೈ ಮುನ್ಸಿಪಾಲ್ ಕಾರ್ಪೊರೇಶನ್ (ಬಿಎಂಸಿ) ಜೆಸಿಬಿ ಮೂಲಕ ಕೆಡವಿದ ಪ್ರಕರಣಕ್ಕೆ ಸಂಬಂಧಿಸಿ ಕಂಗಾನಾರ ಪ್ರತಿಕ್ರಿಯೆ ಬಯಸಿ ಅನೇಕ ಟಿವಿ ಚಾನೆಲ್ ಪತ್ರಕರ್ತರು ವಿಮಾನವನ್ನೇರಿದ್ದರು. ಆ ಸಂದರ್ಭದಲ್ಲಿ ವಿಮಾನದಲ್ಲಿ ಕೋವಿಡ್ 19 ನಿಯಮಾವಳಿ ಸರಿಯಾಗಿ ಪಾಲನೆಯಾಗಿಲ್ಲ. ಸುರಕ್ಷಾ ನಿಯಮ ಉಲ್ಲಂಘನೆಯಾಗಿದೆ. ಈ ಬಗ್ಗೆ ವಿವರಣೆ ನೀಡಿ ಎಂದು ಡಿಜಿಸಿಎ ನೋಟಿಸ್ ಜಾರಿಗೊಳಿಸಿದೆ.
ಇದನ್ನೂ ಓದಿ: ‘ದಾವೂದ್ ಮನೆಯನ್ನು ಧ್ವಂಸ ಮಾಡುವ ತಾಕತ್ತಿಲ್ಲದವರು ಕಂಗನಾ ಕಚೇರಿ ಕೆಡವಿದ್ದಾರೆ…’
ಈ ಬಗ್ಗೆ ಪ್ರತಿಕ್ರಿಯಿಸಿರುವ ಇಂಡಿಗೋ, ನಮ್ಮ ಕ್ಯಾಬಿನ್ ಕ್ರೂ ಮತ್ತು ಕ್ಯಾಪ್ಟನ್ ವಿಮಾನ ಯಾನ ನಿಯಮ ಪಾಲನೆ ಮಾಡುವಂತೆ ಎಲ್ಲರನ್ನೂ ಮನವಿ ಮಾಡಿದ್ದರು. ಈ ಬಗ್ಗೆ ಎಲ್ಲರಿಗೂ ಕೇಳಿಸುವಂತೆ ಘೋಷಣೆಯನ್ನೂ ಮಾಡಿದ್ದರು. ಅಲ್ಲದೆ, ಫೋಟೋ, ವಿಡಿಯೋ ತೆಗೆಯದಂತೆಯೂ ಕಟ್ಟುನಿಟ್ಟಾಗಿ ಹೇಳಿದ್ದಲ್ಲದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆಯೂ ಸೂಚಿಸಿದ್ದರು. ಅಲ್ಲದೆ, ಇಂಡಿಗೋ ಕೂಡ ಈ ಉಲ್ಲಂಘನೆ ವಿಚಾರವನ್ನು ಪೋಸ್ಟ್ ಫ್ಲೈಟ್ ರಿಪೋರ್ಟ್ನಲ್ಲಿ ಉಲ್ಲೇಖಿಸಿದ್ದು ಅಗತ್ಯ ಕಾನೂನು, ನಿಯಮ ಪಾಲನೆಯನ್ನು ಮಾಡಿದೆ ಎಂದು ಸ್ಪಷ್ಟಪಡಿಸಿದೆ. (ಏಜೆನ್ಸೀಸ್)
ಕೋಲ್ಕತಕ್ಕೆ ಹೋಗಿ ಕಂಗನಾ ಅಭಿಮಾನಿಯನ್ನು ಅರೆಸ್ಟ್ ಮಾಡಿದ್ರು ಮುಂಬೈ ಪೊಲೀಸ್!