More

    ಕಂಗನಾರನ್ನು ಕರೆದೊಯ್ದ ಇಂಡಿಗೋಗೆ ಡಿಜಿಸಿಎ ನೋಟಿಸ್​ !

    ನವದೆಹಲಿ: ಚಿತ್ರನಟಿ ಕಂಗನಾ ರಾಣಾವತ್​ ಅವರನ್ನು ಚಂಡೀಗಢದಿಂದ ಮುಂಬೈಗೆ ಕರೆದೊಯ್ದ ಇಂಡಿಗೋಕ್ಕೆ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್​(ಡಿಜಿಸಿಎ) ನೋಟಿಸ್ ಜಾರಿಮಾಡಿದೆ. ಕಂಗನಾ ಅವರು ಸೆಪ್ಟೆಂಬರ್ 9ರಂದು ಚಂಡೀಗಢದಿಂದ ಮುಂಬೈಗೆ ಇಂಡಿಗೋ 6ಇ 264 ವಿಮಾನದಲ್ಲಿ ಪ್ರಯಾಣಿಸಿದ್ದರು.

    ಕಂಗನಾರನ್ನು ಕರೆದೊಯ್ದ ಇಂಡಿಗೋಗೆ ಡಿಜಿಸಿಎ ನೋಟಿಸ್​ !ಮುಂಬೈನ ಬಾಂದ್ರಾದಲ್ಲಿ ಅವರ ಬಂಗ್ಲೆಯನ್ನು ಬೃಹನ್ಮುಂಬೈ ಮುನ್ಸಿಪಾಲ್ ಕಾರ್ಪೊರೇಶನ್​ (ಬಿಎಂಸಿ) ಜೆಸಿಬಿ ಮೂಲಕ ಕೆಡವಿದ ಪ್ರಕರಣಕ್ಕೆ ಸಂಬಂಧಿಸಿ ಕಂಗಾನಾರ ಪ್ರತಿಕ್ರಿಯೆ ಬಯಸಿ ಅನೇಕ ಟಿವಿ ಚಾನೆಲ್ ಪತ್ರಕರ್ತರು ವಿಮಾನವನ್ನೇರಿದ್ದರು. ಆ ಸಂದರ್ಭದಲ್ಲಿ ವಿಮಾನದಲ್ಲಿ ಕೋವಿಡ್ 19 ನಿಯಮಾವಳಿ ಸರಿಯಾಗಿ ಪಾಲನೆಯಾಗಿಲ್ಲ. ಸುರಕ್ಷಾ ನಿಯಮ ಉಲ್ಲಂಘನೆಯಾಗಿದೆ. ಈ ಬಗ್ಗೆ ವಿವರಣೆ ನೀಡಿ ಎಂದು ಡಿಜಿಸಿಎ ನೋಟಿಸ್ ಜಾರಿಗೊಳಿಸಿದೆ.

    ಇದನ್ನೂ ಓದಿ: ‘ದಾವೂದ್​ ಮನೆಯನ್ನು ಧ್ವಂಸ ಮಾಡುವ ತಾಕತ್ತಿಲ್ಲದವರು ಕಂಗನಾ ಕಚೇರಿ ಕೆಡವಿದ್ದಾರೆ…’

    ಈ ಬಗ್ಗೆ ಪ್ರತಿಕ್ರಿಯಿಸಿರುವ ಇಂಡಿಗೋ, ನಮ್ಮ ಕ್ಯಾಬಿನ್ ಕ್ರೂ ಮತ್ತು ಕ್ಯಾಪ್ಟನ್ ವಿಮಾನ ಯಾನ ನಿಯಮ ಪಾಲನೆ ಮಾಡುವಂತೆ ಎಲ್ಲರನ್ನೂ ಮನವಿ ಮಾಡಿದ್ದರು. ಈ ಬಗ್ಗೆ ಎಲ್ಲರಿಗೂ ಕೇಳಿಸುವಂತೆ ಘೋಷಣೆಯನ್ನೂ ಮಾಡಿದ್ದರು. ಅಲ್ಲದೆ, ಫೋಟೋ, ವಿಡಿಯೋ ತೆಗೆಯದಂತೆಯೂ ಕಟ್ಟುನಿಟ್ಟಾಗಿ ಹೇಳಿದ್ದಲ್ಲದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆಯೂ ಸೂಚಿಸಿದ್ದರು. ಅಲ್ಲದೆ, ಇಂಡಿಗೋ ಕೂಡ ಈ ಉಲ್ಲಂಘನೆ ವಿಚಾರವನ್ನು ಪೋಸ್ಟ್ ಫ್ಲೈಟ್​ ರಿಪೋರ್ಟ್​ನಲ್ಲಿ ಉಲ್ಲೇಖಿಸಿದ್ದು ಅಗತ್ಯ ಕಾನೂನು, ನಿಯಮ ಪಾಲನೆಯನ್ನು ಮಾಡಿದೆ ಎಂದು ಸ್ಪಷ್ಟಪಡಿಸಿದೆ. (ಏಜೆನ್ಸೀಸ್)

    ಕೋಲ್ಕತಕ್ಕೆ ಹೋಗಿ ಕಂಗನಾ ಅಭಿಮಾನಿಯನ್ನು ಅರೆಸ್ಟ್ ಮಾಡಿದ್ರು ಮುಂಬೈ ಪೊಲೀಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts