More

    ದೇವದುರ್ಗದಲ್ಲಿ ಶಿವನಗೌಡ ನಾಯಕ ನಾಮಪತ್ರ ಸಲ್ಲಿಕೆ

    ದೇವದುರ್ಗ: ಪರಿಶಿಷ್ಟ ಪಂಗಡಕ್ಕೆ ಮೀಸಲಾದ ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ ಮೂವರು ಅಭ್ಯರ್ಥಿಗಳಿಂದ ಆರು ನಾಮಪತ್ರ ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿ ಎಂ.ಎನ್.ಚೇತನ್ ಕುಮಾರ ಹೇಳಿದರು.

    ಶಾಸಕ ಕೆ.ಶಿವನಗೌಡ ನಾಯಕ ಬಿಜೆಪಿ ಅಭ್ಯರ್ಥಿಯಾಗಿ ನಾಲ್ಕು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಿದರು. ಶಿವಣ್ಣ ತಾತ ಮುಂಡರಗಿ ಸೂಚಕರಾಗಿದ್ದು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಗೋನಾಳ ಮಲ್ಲಣ್ಣ ತಾತ, ಬಸವರಾಜ, ಅಮರೇಶ ಇದ್ದರು. ಪಟ್ಟಣದ ಜೆಪಿ ವೃತ್ತದಿಂದ ಮಿನಿವಿಧಾನಸೌಧವರೆಗೆ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಬಂದು ನಾಮಪತ್ರ ಸಲ್ಲಿಸಿದರು. ಸಂಸದ ರಾಜಾ ಅಮರೇಶ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ರಮಾನಂದ ಯಾದವ್ ಇತರರಿದ್ದರು.

    ಕಾಂಗ್ರೆಸ್ ಅಭ್ಯರ್ಥಿಯಾಗಿ ಶ್ರೀದೇವಿ ರಾಜಶೇಖರ ನಾಯಕ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದರು. ಪುರಸಭೆ ಅಧ್ಯಕ್ಷ ಶರಣಗೌಡ ಗೌರಂಪೇಟೆ, ಶಿವಪ್ಪ ಪಲಕನಮರಡಿ, ಸಿದ್ದರಾಮಯ್ಯ, ಶಂಕರಗೌಡ ಮಂದಕಲ್, ಲಕ್ಷ್ಮಣ ಜ್ಯೋತಿ, ಶಿವನಗೌಡ ಗೌರಂಪೇಟೆ, ಸಿದ್ದಯ್ಯ ತಾತ ಗುರುವಿನ ಇದ್ದರು. ಶ್ರೀದೇವಿ ನಾಯಕ ಏ.20ರಂದು ಮತ್ತೊಮ್ಮೆ ರಾಜ್ಯ ನಾಯಕರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಲಿದ್ದಾರೆ.

    ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷೆ ರೂಪಾ ಶ್ರೀನಿವಾಸ್ ನಾಯಕ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಮಹಾದೇವಿ, ಉಮಾದೇವಿ ನಾಯಕ, ಅಯ್ಯನಗೌಡ, ಮಹಮ್ಮದ್ ಮುಸ್ತಾಫ್, ದೇವರಾಜ್, ಪರಶುರಾಮ್, ಸುನೀಲ್ ಕುಮಾರ, ಬಸವರಾಜ, ನಾಗರಾಜ, ಹನುಮಯ್ಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts