ದೇವದುರ್ಗ: ಮುಷ್ಟೂರು ಗ್ರಾಪಂನಲ್ಲಿ ನರೇಗಾ ಯೋಜನೆಯಡಿ ನಡೆದಿರುವ ಅವ್ಯವಹಾರದ ತನಿಖೆಗೆ ಆಗ್ರಹಿಸಿ ಪಟ್ಟಣದ ತಾಪಂ ಕಚೇರಿ ಮುಂದೆ ಸೆ.12ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಹನುಮಂತಪ್ಪ ಮನ್ನಾಪುರಿ ಹೇಳಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದರು. ಪ್ರಮುಖರಾದ ಯಲ್ಲಪ್ಪ ದೊಡ್ಡಮನೆ ಆಲ್ದರ್ತಿ, ಭೀಮರಾಯ ಭಂಡಾರಿ, ರಂಗನಾಥ ನಾಯಕ ಜಾಲಹಳ್ಳಿ,. ರಮೇಶ್ ಕಾರ್ಪೆಂಟರ್ ಇತರರಿದ್ದರು.