ನವದೆಹಲಿ: ಆಘಾತಕಾರಿ ಘಟನೆಯೊಂದರಲ್ಲಿ ವ್ಯಕ್ತಿಯೋರ್ವ ತನ್ನ ಪ್ರೇಯಸಿಯನ್ನು ಹತ್ಯೆ ಮಾಡಿ ಆ ಬಳಿಕ ಶೇವಿಂಗ್ ಬ್ಲೇಡ್ನಿಂದ ಆಕೆಯ ಕತ್ತು ಸೀಳಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಘಟನೆyu ಕಾಶಿಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಉಧಮ್ ಸಿಂಗ್ ನಗರದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಸಾವಿತ್ರಿ ದೇವಿ ಎಂದು ಗುರುತಿಸಲಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ಹಿನ್ನಲೆ?
ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ವರಿಷ್ಠಾಧಿಕಾರಿ ಅಭಯ್ ಪ್ರತಾಪ್ ಸಿಂಗ್ ಪ್ರೇಯಸಿ ತನಗೆ ಮೋಸ ಮಾಡುತ್ತಿದ್ದಾಳೆ ಎಂದು ಭಾವಿಸಿದ ಆರೋಪಿ ಆಕೆಯ ಜೊತೆಗೆ ಮೊದಲಿಗೆ ಮಾತನಾಡುವ ನೆಪದಲ್ಲಿ ಜಗಳವಾಡಿದ್ದಾನೆ.
ಇಬ್ಬರ ನಡುವೆ ವಾಗ್ವಾದ ಜೋರಾದ ಪರಿಣಾಮ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪ್ರಿಯಕರ ಪ್ರೇಯಸಿಯನ್ನು ತಳ್ಳಿದ್ದಾನೆ. ಈ ವೇಳೆ ಕೆಳಗೆ ಬಿದ್ದ ಮಹಿಳೆ ತಲೆಗೆ ಪೆಟ್ಟಾಗಿದ್ದು ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈ ವೇಳೆ ಭಯಭಿತನಾದ ಆರೋಪಿಯೂ ಆಕೆಯ ಕತ್ತನ್ನು ಶೇವಿಂಗ್ ಬ್ಲೇಡ್ನಿಂದ ಸೀಳಿದ್ದಾನೆ.
ಇದನ್ನೂ ಓದಿ: VIDEO| ಕಳಪೆ ಕಾಮಗಾರಿ; ಬರಿಗೈಯಲ್ಲಿ ಡಾಂಬರು ಕಿತ್ತೆಸೆದ ಗ್ರಾಮಸ್ಥರು
ಮದುವೆಯಾಗಿದ್ದರು ಅಕ್ರಮ ಸಂಬಂಧ
ಬಳಿಕ ಮಹಿಳೆಯ ಮೃತದೇಹವನ್ನು ದೆಹಲಿ ಹೊರವಲಯದಲ್ಲಿರುವ ಕನೋರಿ ಪ್ರದೇಶದಲ್ಲಿರುವ ಕಾಲಿ ಜಾಗದಲ್ಲಿ ಶವವನ್ನು ಹೂತ್ತಿಟ್ಟು ಪರಾರಿಯಾಗಿದ್ದ. ಸ್ಥಳೀಯರು ಮಹಿಳೆಯ ಮೃತದೇಹವನ್ನು ನೋಡಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಆರೋಪಿ ಬಲೆಗೆ ಬಿದ್ದಿದ್ದಾನೆ.
ದಿನಗೂಲಿ ನೌಕಕರಾಗಿ ಕೆಲಸ ಮಾಡುತ್ತಿದ್ದ ಮೃತ ಮಹಿಳೆ ಹಾಗೂ ಬಂಧಿತ ಆರೋಪಿ ಕಳೆದ ಎಂಟು ವರ್ಷಗಳಿಂದ ಸಂಬಂಧ ಹೊಂದಿದ್ದರು. ಈ ಇಬ್ಬರಿಗೂ ಮದುವೆಯಾಗಿದ್ದರು ಸಹ ಅಕ್ರಮ ಸಂಬಂಧ ಹೊಂದಿದ್ದಾಗಿ ಆರೋಪಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ಕೃತ್ಯಕ್ಕೆ ಬಳಸಲಾಗಿದ್ದ ಬ್ಲೇಡ್ ಹಾಗೂ ಇನ್ನಿತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಯ್ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.