More

    ಮಯಾಂಕ್ ಬಳಗಕ್ಕೆ ಇಂದು ದೆಹಲಿ ಸವಾಲು: ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿ ಕರ್ನಾಟಕ

    ಅಹಮದಾಬಾದ್: ಸತತ ಎರಡು ಗೆಲುವಿನೊಂದಿಗೆ ಭರ್ಜರಿ ಆರಂಭ ಕಂಡಿರುವ ಕರ್ನಾಟಕ ರಾಜ್ಯ ತಂಡ ದೇಶೀಯ ಏಕದಿನ ಟೂರ್ನಿ ವಿಜಯ್ ಹಜಾರೆ ಟ್ರೋಫಿಯ ತನ್ನ 3ನೇ ಲೀಗ್ ಪಂದ್ಯದಲ್ಲಿ ಸೋಮವಾರ ದೆಹಲಿ ತಂಡದ ಸವಾಲು ಎದುರಿಸಲಿದೆ. ಮಯಾಂಕ್ ಅಗರ್ವಾಲ್ ಪಡೆ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ.

    ಉಭಯ ತಂಡಗಳೂ ಆಡಿರುವ 2 ಪಂದ್ಯಗಳಿಂದ 8 ಅಂಕ ಕಲೆಹಾಕಿದ್ದು, ಕರ್ನಾಟಕಕ್ಕಿಂತ (+2.740) ಉತ್ತಮ ರನ್ ರೇಟ್ ಹೊಂದಿರುವ ದೆಹಲಿ (+4.435) ‘ಸಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದರೆ, ಮಯಾಂಕ್ ಬಳಗ 3ನೇ ಸ್ಥಾನದಲ್ಲಿದೆ. ಚಂಢೀಗಡ 2ನೇ ಸ್ಥಾನದಲ್ಲಿದೆ.

    ಮೊದಲ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್, ಆರ್. ಸಮರ್ಥ್ ಶತಕ ಸಿಡಿಸಿ ಭರ್ಜರಿ ಾರ್ಮ್‌ನಲ್ಲಿದ್ದಾರೆ. ದೇವದತ್ ಪಡಿಕಲ್ ಎರಡು ಪಂದ್ಯಗಳಲ್ಲಿ ರನ್ ಮಳೆ ಹರಿಸಿದರೆ ,ಅನುಭವಿ ಮನೀಷ್ ಪಾಂಡೆ ಸಹ ಉತ್ತಮ ಲಯದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸಿದ್ಧ ಕೃಷ್ಣ ಗೈರಿನ ಕೊರತೆಯನ್ನು ವೈಶಾಕ್ ವಿಜಯ್ ಕುಮಾರ್, ವಿ.ಕೌಶಿಕ್ ನೀಗಿಸಿದ್ದಾರೆ. ಇನ್ನೂ ದೆಹಲಿ ಸಹ ಮೊದಲೆರಡು ಪಂದ್ಯಗಳಲ್ಲಿ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಯುವ ಬ್ಯಾಟರ್ ಯಶ್ ಧುಲ್ ತಂಡವನ್ನು ಮುನ್ನಡೆಸಲಿದ್ದಾರೆ.

    ಪಂದ್ಯ ಆರಂಭ: ಬೆಳಗ್ಗೆ 9
    ನೇರಪ್ರಸಾರ: ಜಿಯೋ ಸಿನಿಮಾ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts