More

    ಕೇಂದ್ರ ರಕ್ಷಣಾ ಇಲಾಖೆ ಕಾರ್ಯದರ್ಶಿಗೆ ಕರೊನಾ ವೈರಸ್ ಸೋಂಕು

    ನವದೆಹಲಿ: ಇಲ್ಲಿಯ ಸೌತ್ ಬ್ಲಾಕ್ ನಲ್ಲಿರುವ ಕೇಂದ್ರ ರಕ್ಷಣಾ ಇಲಾಖೆy ಕಾರ್ಯದರ್ಶಿ ಅಜಯ್​​ಕುಮಾರ್ ಗೆ ಕರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ.
    ಕೇರಳ ಕೇಡರ್​​​ನ 1985 ರ ಬ್ಯಾಚ್ ನ ಐಎಎಸ್ ಅಧಿಕಾರಿ ಅಜಯ್ ಕುಮಾರ್ ಅವರಿಗೆ ಕರೊನಾ ಸೋಂಕು ದೃಢಪಟ್ಟಿರುವ ಸಂಗತಿ ಸೌತ್ ಬ್ಲಾಕ್​​​ನಲ್ಲಿ ಆಘಾತವನ್ನುಂಟು ಮಾಡಿದ್ದು, ರಕ್ಷಣಾ ಸಚಿವ ರಾಜ್​ನಾಥ್ ಸಿಂಗ್ ಹಾಗೂ ಮಿಲಿಟರಿ ಮತ್ತು ನಾಗರಿಕ ಸೇವೆಯ ಅಧಿಕಾರಿಗಳು ಕಚೇರಿಗೆ ಹಾಜರಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.
    ಸೌತ್ ಬ್ಲಾಕ್​​​​ನಲ್ಲಿ ವ್ಯಾಪಕ ಸಂಪರ್ಕ ಪತ್ತೆ ಮತ್ತು ಕಚೇರಿಗಳಲ್ಲಿ ನೈರ್ಮಲ್ಯೀಕರಣ ನಡೆಯುತ್ತಿದೆ. ಕಳೆದ ಎರಡು ದಿನಗಳಿಂದ ಅಜಯ್​​ಕುಮಾರ್ ಅವರೊಂದಿಗೆ ನಿಕಟ ಸಂಪರ್ಕಕ್ಕೆ ಬಂದ ಅಂದಾಜು 30 ಜನರ ಪಟ್ಟಿ ಇದೆ. ಸ್ವಯಂ ಕ್ವಾರಂಟೈನ್​​ಗೆ ಹೋಗಲು ಅವರಿಗೆ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಪಿಒಕೆಯಲ್ಲಿರುವ ಅನಧಿಕೃತ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ ಬೇಡ ಎಂದ ಕೇಂದ್ರ

    ಕಾರ್ಯದರ್ಶಿಗೆ ಸೋಂಕಿನ ಹಿನ್ನೆಲೆಯಲ್ಲಿ ಕಚೇರಿಯಿಂದ ಅನೇಕ ಹಿರಿಯ ಅಧಿಕಾರಿಗಳು ದೂರವೇ ಉಳಿದಿದ್ದರು.
    ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ನಿನ್ನೆ, ಮೊನ್ನೆ ಕಚೇರಿಗೆ ಭೇಟಿ ನೀಡಿಲ್ಲ. ಅವರು ಸ್ವಯಂ ಕ್ವಾರಂಟೈನ್​​ನಲ್ಲಿಯೂ ಇರಲಿಲ್ಲ ಎಂದು ಹೇಳಲಾಗಿತ್ತು.
    ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಅಜಯ್​​ಕುಮಾರ್ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಐಎಎಸ್ ಅಧಿಕಾರಿಯಾಗಿದ್ದರು.
    ಭೂಸೇನೆ ಮತ್ತು ನೌಕಾ ಸೇನೆ ಮುಖ್ಯಸ್ಥರ ಕಚೇರಿಗಳೂ ಸೌತ್ ಬ್ಲಾಕ್ ನಲ್ಲೇ ಇವೆ.
    ಡಿಫೆನ್ಸ್ ಸ್ಟಾಫ್ ಚೀಫ್ ಜನರಲ್ ಬಿಪಿನ್ ರಾವತ್ ಅವರ ಕಚೇರಿ ಕೂಡ ಸೌತ್ ಬ್ಲಾಕ್ ಬೇಸ್ ಮೆಂಟ್ ನಲ್ಲಿದೆ.

    ನವೀಕೃತ ವೀಸಾದೊಂದಿಗೆ ಭಾರತಕ್ಕೆ ಬರಲು ವಿದೇಶಿ ವ್ಯಾಪಾರಿಗಳಿಗೆ ಷರತ್ತುಬದ್ಧ ಅನುಮತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts