ಮಾನಹಾನಿ ಸಂದೇಶ ರವಾನೆ, ಕ್ರಮಕ್ಕೆ ಆಗ್ರಹ
ಗುರುಪುರ: ಸಾಮಾಜಿಕ ಜಾಲತಾಣದಲ್ಲಿ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ವಿರುದ್ಧ ಮಾನಹಾನಿಕರ ಸಂದೇಶ ರವಾನಿಸಿರುವ ಕುತ್ತಾರಿನ ಮುನ್ನ ಎಂಬಾತನ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ದಯಾನಂದ್ ಅವರ ಕುಟುಂಬ ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದೆ.
ದಯಾನಂದರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ, ಅವರು ತಂದೆಯನ್ನೇ ಕೊಂದವರು ಎಂದು ಸಂದೇಶ ರವಾನಿಸಿ ಕುಟುಂಬದ ತೇಜೋವಧೆ ಮಾಡಿದ್ದಾರೆ.
ಇದರಿಂದ ನಮಗೆ ಮಾನಸಿಕ ಆಘಾತವಾಗಿದೆ. ಸಂದೇಶ ರವಾನಿಸಿದವನ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ದಯಾನಂದ ಅವರ ಸಹೋದರ ಬಾಲಕೃಷ್ಣ ಕತ್ತಲ್ಸಾರ್ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ