ಕೆಲ ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪ ಪ್ರವಾಸದ ಫೋಟೋಗಳನ್ನು ಹಂಚಿಕೊಂಡಿದ್ದರು. ಅದಕ್ಕೆ ಮಾಲ್ದೀವ್ಸ್ನ ಕೆಲ ಸಚಿವರು ವ್ಯಂಗ್ಯವಾಡಿದ್ದರು. ಇದು ಭಾರತೀಯರ ಅಸಮಾಧಾನಕ್ಕೆ ಕಾರಣವಾಗಿತ್ತು. ಅಕ್ಷಯ್ ಕುಮಾರ್, ಸಲ್ಮಾನ್ ಖಾನ್, ವರುಣ್ ಧವನ್, ಶ್ರದ್ಧಾ ಕಪೂರ್, ಸಚಿನ್ ತೆಂಡುಲ್ಕರ್, ವೆಂಕಟೇಶ್ ಪ್ರಸಾದ್, ವೀರೇಂದರ್ ಸೆಹ್ವಾಗ್ ಸೇರಿ ಹಲವಾರು ಸೆಲೆಬ್ರಿಟಿಗಳು ಲಕ್ಷದ್ವೀಪದ ಪ್ರಚಾರ ಮಾಡುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.
ಇದನ್ನೂ ಓದಿ : ನಾನೇನಾದ್ರೂ ರಾಜಕೀಯಕ್ಕೆ ಎಂಟ್ರಿಯಾದ್ರೆ ಮೊದಲು ಮಾಡೋ ಕೆಲಸ ಇದೆ ಅಂದ್ರು ಶಿವಣ್ಣ!
ಅದೇ ರೀತಿ ಬಾಲಿವುಡ್ ನಟ ರಣವೀರ್ ಸಿಂಗ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದರು. ಆದರೆ, ಅವರ ಪೋಸ್ಟ್ ಇದೀಗ ಟ್ರೋಲ್ ಆಗುತ್ತಿದೆ. ಏಕೆಂದರೆ ಮಾಲ್ದೀವ್ಸ್ ಫೋಟೋಗಳನ್ನೇ ಜಾಲತಾಣದಲ್ಲಿ ಹಂಚಿಕೊಂಡಿದ್ದ ರಣವೀರ್, ‘2024ರಲ್ಲಿ ನಾವೆಲ್ಲ ಭಾರತೀಯರು ನಮ್ಮ ದೇಶದ ಹೊಸ ಜಾಗಗಳನ್ನೇ ಅನ್ವೇಷಿಸೋಣ. ಬೀಚ್ಗಳು ಮತ್ತು ಸುಂದರ ತಾಣಗಳಿಗೆ ಭೇಟಿ ನೀಡೋಣ’ ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ : ಶ್ರೀರಾಮ ವನವಾಸದಲ್ಲಿ ಮಾಂಸ ಸೇವಿಸಿದ್ದ; ಒಟಿಟಿ ಫ್ಲಾಟ್ಫಾರ್ಮ್ ಬಹಿಷ್ಕರಿಸುವಂತೆ ಆಗ್ರಹ
ತಮ್ಮ ತಪ್ಪಿನ ಅರಿವಾಗಿ ರಣವೀರ್ ಕೆಲ ಸಮಯದಲ್ಲೇ ಆ ಪೋಸ್ಟ್ ಡಿಲೀಟ್ ಮಾಡಿದರಾದರೂ, ಅಷ್ಟರಲ್ಲಾಗಲೇ ಟ್ರೋಲ್ಗಳಿಗೆ ಆಹಾರವಾಗಿದ್ದರು. ಸದ್ಯ ರಣವೀರ್ ‘ಸಿಂಘಂ ಅಗೇನ್’ ಚಿತ್ರದಲ್ಲಿ ಬಿಜಿಯಾಗಿದ್ದಾರೆ.