ಉತ್ತರಪ್ರದೇಶ: ರೋಗಿಯೊಬ್ಬನಿಗೆ ರಕ್ತದ ಬದಲು ಮೂಸಂಬಿ ಜ್ಯೂಸ್ ಕೊಟ್ಟ ಪರಿಣಾಮವಾಗಿ ಆತ ಸಾವಿಗೀಡಾಗಿದ್ದ ಎಂಬ ಪ್ರಕರಣವೊಂದು ಇತ್ತೀಚೆಗೆ ಬಹಿರಂಗಗೊಂಡಿತ್ತು. ಇದು ದೇಶದ ಗಮನವನ್ನೇ ಸೆಳೆದಿದ್ದು, ಇದೀಗ ಈ ಪ್ರಕರಣದ ಹಿಂದಿನ ಅಸಲಿಯತ್ತು ಬಯಲಾಗಿದೆ.
ಉತ್ತರಪ್ರದೇಶ ಪ್ರಯಾಗ್ರಾಜ್ನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಡೆಂಘೆ ರೋಗಿಯೊಬ್ಬರಿಗೆ ಪ್ಲೇಟ್ಲೆಟ್ ಬದಲು ಮೂಸಂಬಿ ಜ್ಯೂಸ್ ಕೊಟ್ಟಿದ್ದರು ಎನ್ನಲಾಗಿದ್ದು, ಆ ರೋಗಿ ಬಳಿಕ ಸಾವಿಗೀಡಾಗಿದ್ದ. ಇದಾದ ಬೆನ್ನಿಗೆ ನಕಲಿ ಪ್ಲೇಟ್ಲೆಟ್ ಮಾರುತ್ತಿದ್ದ ದಂಧೆಯೊಂದರ ಆರೋಪಿಗಳು ಕೂಡ ಸಿಕ್ಕಿಬಿದ್ದಿದ್ದರು.
ಆದರೆ ಇದು ಮೂಸಂಬಿ ಜ್ಯೂಸ್ ಕೊಟ್ಟು ಸಂಭವಿಸಿದ್ದ ಸಾವಲ್ಲ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸಮಜಾಯಿಷಿ ನೀಡಿದ್ದರು. ಈ ವಿಷಯವಾಗಿ ಇದೀಗ ಅಧಿಕೃತ ಮಾಹಿತಿಯೊಂದು ಹೊರಬಿದ್ದಿದೆ. ಮಾತ್ರವಲ್ಲ, ರೋಗಿ ಕೊಟ್ಟಿದ್ದೇನು ಎಂಬುದು ಕೂಡ ಬಯಲಾಗಿದೆ.
ಇದನ್ನೂ ಓದಿ: ರೋಗಿಗೆ ಪ್ಲೇಟ್ಲೆಟ್ಸ್ ಬದಲು ಮೂಸಂಬಿ ಜ್ಯೂಸ್ ಕೊಟ್ಟು ಸಾವು; ಈ ಪ್ರಕರಣದ ಬೆನ್ನಿಗೇ ಕರಾಳ ದಂಧೆ ಬಯಲು!
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಪ್ರಯಾಗ್ರಾಜ್ ಜಿಲ್ಲಾಧಿಕಾರಿ ಸಂಜಯ್ ಖತ್ರಿ, ತ್ರಿಸದಸ್ಯ ಸಮಿತಿಯೊಂದನ್ನು ರಚಿಸಿದ್ದು, ಅದರ ತನಿಖಾ ವರದಿ ಪ್ರಕಟಗೊಂಡಿದೆ. ವರದಿ ಪ್ರಕಾರ, ರೋಗಿ ಕೊಟ್ಟಿದ್ದು ಮೂಸಂಬಿ ಜ್ಯೂಸ್ ಅಲ್ಲ, ಪ್ಲೇಟ್ಲೆಟ್. ಆದರೆ ಅದನ್ನು ಸರಿಯಾಗಿ ಸಂರಕ್ಷಿಸಿ ಇಡಲಾಗಿಲ್ಲ. ಹೀಗಾಗಿ ಅದರಿಂದ ಸಾವಾಗಿದೆ. ವರದಿ ಆಧಾರದ ಮೇಲೆ ಮುಂದಿನ ಕ್ರಮಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.
‘ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೆ ಪರಾಕ್’: ನಿರೀಕ್ಷೆಗೂ ಮೀರಿ ನಿಜವಾಯ್ತಾ ಕಾರ್ಣಿಕ?