More

    ಗದಗ: ಈಜಲು ಹೋಗಿದ್ದ ಯುವಕ ನೀರಲ್ಲಿ ಮುಳುಗಿ ಮೃತ

    ಗದಗ:  ಡಂಬಳ ವಿಕ್ಟೋರಿಯಾ ಮಹರಾಣಿ (ಗೋಣಿಸಮುದ್ರ ) ಕೆರೆಯಲ್ಲಿ ಈಜಲು ಹೋಗಿದ್ದ ಡಂಬಳ ಗ್ರಾಮದ ಅರುಣ ಸಿದ್ದಣ್ಣ ಯತ್ನಳಿ (17) ಮೃತ ಯುವಕ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
    ಡಂಬಳದ ಹೊಸಪೇಟಿಯವರ ಓಣಿಯ ನಿವಾಸಿಯಾದ್ದ ಅರುಣ, ಮಂಗಳವಾರ ತನ್ನ ಸೇಹಿತರೊಂದಿಗೆ ಸೇರಿಕೊಂಡು ಡಂಬಳ ಕೆರೆಗೆ ಈಜಲು ಹೋಗಿದ್ದಾನೆ. ಈ ವೇಳೆ ಅವಘಡ ಸಂಭವಿಸಿದ್ದು, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಗ್ರಾಮದ ಗ್ರಾಮಸ್ಥರಿಂದ ಅರುಣಗಾಗಿ ಮಂಗಳವಾರ ಸಂಜೆಯಿಂದ ರಾತ್ರಿಯವರಿಗೆ ಶೋಧಿಸಿದ್ದರು. ಮೃತದೇಹ ಪತ್ತೆಯಾಗಲ್ಲಿಲ್ಲ.
    ಬುಧವಾರ ಬೆಳಿಗ್ಗೆ 11 ಗಂಟೆ ಹೊವಿನಹಡಗಲಿ ತಾಲೂಕಿನ ಮದಲಗಟ್ಟಿ ಗ್ರಾಮದ ಮೀನುಗಾರರ ತಂಡದಿಂದ ಅರುಣ ಮೃತದೇಹವನ್ನು ಕೆರೆಯಿಂದ ಮೇಲೆತ್ತಿದ್ದು, ಮಗ ಮೃತದೇಹ ನೋಡಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
    ಸ್ಥಳಕ್ಕೆ ಮುಂಡರಗಿ ತಹಶೀಲ್ದಾರ್ ಶೃತಿ ಮಳ್ಳಪ್ಪಗೌಡರ, ಉಪತಹಸೀಲ್ದಾರ್ ಸಿ ಕೆ ಬೆಳೆವಟಿಗಿ, ಕಂದಾಯ ನಿರೀಕ್ಷಕ ಪ್ರಭು ಬಾಗಲಿ, ಗ್ರಾಮ ಆಡಳಿತಾಧಿಕಾರಿ ಮಂಜುನಾಥ ವಾಲ್ಮೀಕಿ, ಡಂಬಳ ಪೊಲೀಸ್ ಠಾಣೆ ಸಿಬ್ಬಂದಿಗಳಾದ ವಾಯ್ ಎನ್ ಗರಡಿಮನಿ, ಬಸವರಾಜ ಬಣಕಾರ ಇತರರು ಇದ್ದರು. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts