ಬಾಗಲಕೋಟೆ: ಅತ್ತ ಕೋಟ್ಯಂತರ ರೂಪಾಯಿ ಸಾಲ ಪಡೆದಿದ್ದ ಕಾರ್ಖಾನೆ ಬಂದ್ ಆಗಿದ್ದರೆ, ಇತ್ತ ಆ ಕಾರ್ಖಾನೆಗೆ ಬೇಕಾಬಿಟ್ಟಿಯಾಗಿ ಸಾಲ ನೀಡಿದ್ದ ಅಧಿಕಾರಿ ಅಮಾನತಾಗಿದ್ದಾರೆ. ಸಕ್ಕರೆ ಕಾರ್ಖಾನೆ ಅಧ್ಯಕ್ಷ ಹಾಗೂ ಬ್ಯಾಂಕ್ನ ಕಿರಿಯ ವ್ಯವಸ್ಥಾಪಕರ ಅವ್ಯವಹಾರ ಈ ಮೂಲಕ ಸಾಬೀತಾಗಿದೆ.
ಬಾಗಲಕೋಟೆಯ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಮಣ್ಣ ತಳೇವಾಡ ಅವರು ಡಿಸಿಸಿ ಬ್ಯಾಂಕ್ನಿಂದ 2018ರಲ್ಲಿ 12 ಕೋಟಿ ರೂ. ಸಾಲ ಪಡೆದಿದ್ದರು. ಬ್ಯಾಂಕ್ನ ಕಿರಿಯ ವ್ಯವಸ್ಥಾಪಕ ಎ.ಬಿ. ಪಾಟೀಲ್ ನಿಯಮ ಪಾಲಿಸದೆ ಬೇಕಾಬಿಟ್ಟಿಯಾಗಿ ಸಾಲದ ಹಣ ಬಿಡುಗಡೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಇದನ್ನೂ ಓದಿ: ನಿವೃತ್ತ ಎಸಿಪಿಗೇ ಮೋಸ; ನಿರ್ಮಾಣ್ ಶೆಲ್ಟರ್ಸ್ ವಿರುದ್ಧ ವಂಚನೆ ಆರೋಪ..
ಈ ಬಗ್ಗೆ ತನಿಖೆ ನಡೆಸಿದ್ದ ಬ್ಯಾಂಕ್ ಅಧಿಕಾರಿಗಳು ಸಾಲ ಮಂಜೂರಾತಿ ಕರಾರುಗಳನ್ನು ಉಲ್ಲಂಘನೆ ಮಾಡಿ ಎ.ಬಿ.ಪಾಟೀಲ್ ಸಾಲ ಬಿಡುಗಡೆ ಮಾಡಿದ್ದು, ಅತ್ತ ಸಾಲ ಪಡೆದವರು ಅದನ್ನು ನಿಗದಿತ ಉದ್ದೇಶಕ್ಕೂ ಬಳಸಿರಲಿಲ್ಲ. ಈ ಮೂಲಕ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುವಲ್ಲಿ ಪಾಟೀಲ್ ವಿಫಲರಾಗಿದ್ದಾರೆ ಎಂದು ನಿರ್ಣಯಿಸಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಸಿಇಒ ಆದೇಶ ಹೊರಡಿಸಿದ್ದಾರೆ.
ಮತ್ತೊಂದೆಡೆ ನಷ್ಟ ಎಂದು ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಬಂದ್ ಮಾಡಲಾಗಿದ್ದು, ಆಡಳಿತ ಮಂಡಳಿಯನ್ನು ಸೂಪರ್ ಸೀಡ್ ಮಾಡುವಂತೆ ಕಾರ್ಮಿಕರು 55 ದಿನಗಳಿಂದ ಧರಣಿ ನಡೆಸುತ್ತಿದ್ದಾರೆ.
ಸ್ಟಾರ್ ನಟನ ತೋಟದಲ್ಲಿ ಅಪ್ರಾಪ್ತ ವಯಸ್ಸಿನವಳ ಮೇಲೆ ಅತ್ಯಾಚಾರ; ಪೋಕ್ಸೊ ಕಾಯ್ದೆಯಡಿ ಆರೋಪಿಯ ಬಂಧನ..
ಮಾತು ಬರದವಳನ್ನೂ ಬಿಡದ ಕಾಮುಕ; ಮೂಗಿಯನ್ನು ಅತ್ಯಾಚಾರ ಮಾಡಿದ ಚಾಲಕ ಒಂದೇ ಗಂಟೆಯಲ್ಲೇ ಸಿಕ್ಕಿಬಿದ್ದ..