More

    ಪಡೆದ ಸಾಲ ಮೂಲ ಉದ್ದೇಶಕ್ಕೆ ಬಳಸಿ

    ಕಡೂರು: ಪರಸ್ಪರ ಸಹಕಾರದಿಂದ ಅಭಿವೃದ್ಧಿ ಸಾಧ್ಯ. ಸಹಕಾರ ತತ್ವದಲ್ಲಿ ನಂಬಿಕೆ ಇಟ್ಟು ವ್ಯವಸ್ಥಿತ ಜೀವನ ನಡೆಸಿದರೆ ನೆಮ್ಮದಿಗೆ ದಾರಿ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಶೆಟ್ಟಿಹಳ್ಳಿ ರಾಮಪ್ಪ ತಿಳಿಸಿದರು.

    ಪಟ್ಟಣದ ಪಿಕಾರ್ಡ್ ಬ್ಯಾಂಕ್ ಸಭಾಂಗಣದಲ್ಲಿ ಸಹಕಾರ ಸಪ್ತಾಹದ ಅಂಗವಾಗಿ ಏರ್ಪಡಿಸಿದ್ದ ಯುವಜನ ಮಹಿಳಾ ಮತ್ತು ಅಬಲ ವರ್ಗದವರಿಗಾಗಿ ಸಹಕಾರ ಸಂಸ್ಥೆಗಳ ದಿನಾಚರಣೆಯಲ್ಲಿ ಮಾತನಾಡಿ, ಸಹಕಾರ ಸಂಘಗಳಲ್ಲಿ ಪಡೆದ ಸಾಲವನ್ನು ಮೂಲ ಉದ್ದೇಶಕ್ಕೆ ಬಳಸುವುದರ ಜತೆಗೆ ಸಕಾಲಕ್ಕೆ ಮರುಪಾವತಿಯನ್ನೂ ಮಾಡಿದರೆ ಸಂಘದ ಅಭಿವೃದ್ಧಿ ಸಾಧ್ಯ ಮತ್ತು ಆರ್ಥಿಕ ಸ್ವಾವಲಂಬನೆ ಸಾಧಿಸಬಹುದು ಎಂದು ಹೇಳಿದರು.

    ಸಹಕಾರ ಸಂಘಗಳಿಂದ ಪ್ರತಿಯೊಬ್ಬರೂ ತಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಂಡು ಕನಸುಗಳನ್ನು ಸಾಕಾರ ಮಾಡಿಕೊಳ್ಳಬಹುದು. ಸಹಕಾರ ತತ್ವದಡಿ ಪಿಕಾರ್ಡ್ ಬ್ಯಾಂಕ್ ಗ್ರಾಮೀಣ ರೈತರ ಏಳಿಗೆಗಾಗಿ ನಿರಂತರ ಶ್ರಮಿಸುತ್ತಿದೆ. ಸಹಕಾರ ಸಂಘಗಳಲ್ಲಿ ಮಹಿಳೆಯರ ಪಾತ್ರ ಮತ್ತು ಮಹಿಳಾ ಮತ್ತು ಸಹಭಾಗಿತ್ವ ಕುರಿತು ಮಹಿಳಾ ಸದಸ್ಯರ ಶಿಕ್ಷಣ ಯೋಜನಾಧಿಕಾರಿ ಎ.ಜಿ.ಅನಿತಾ ಉಪನ್ಯಾಸ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts