More

    ಕಾಲುವೆ ಜಾಲಗಳ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಿ ಡಿಸಿ ಟಿ.ಭೂಬಾಲನ್ ಆದೇಶ

    ವಿಜಯಪುರ: ಜನ-ಜಾನುವಾರುವಿಗೆ ಕುಡಿಯುವ ನೀರಿನ ಬವಣೆ ನೀಗಿಸಲೆಂದು ಜಿಲ್ಲೆಯ ಸಣ್ಣ ನೀರಾವರಿ ಹಾಗೂ ಜಿಪಂ ವ್ಯಾಪ್ತಿಯ ಕೆರೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಕಾಲುವೆ ಕೊನೆಯವರೆಗೆ ನಿಗದಿತ ಪ್ರಮಾಣದಲ್ಲಿ ನೀರನ್ನು ಒದಗಿಸಲು ಅನುಕೂಲವಾಗುವ ದೃಷ್ಟಿಯಿಂದ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಯಾವುದೇ ಅಹಿತಕರ ಘಟನೆ ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕಾಲುವೆ ಜಾಲದ ವ್ಯಾಪ್ತಿಯ ದಡದ 100 ಅಡಿ ಪ್ರದೇಶವನ್ನು 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿ ಟಿ.ಭೂಬಾಲನ್ ಆದೇಶ ಹೊರಡಿಸಿದ್ದಾರೆ.

    ಮುಳವಾಡ ಏತ ನೀರಾವರಿ ಹಂತ-2ರ ಪೂರ್ವ ಕಾಲುವೆ, ಪಶ್ಚಿಮ ಕಾಲುವೆಗಳ ಜಾಲದ ಅಡಿಯಲ್ಲಿ ಬರುವ ವಿಜಯಪುರ ಮುಖ್ಯ ಕಾಲುವೆ, ಬಸವನಬಾಗೇವಾಡಿ ಶಾಖಾ ಕಾಲುವೆ, ತಿಡಗುಂದಿ ಶಾಖಾ ಕಾಲುವೆ, ಹೂವಿನಹಿಪ್ಪರಗಿ ಶಾಖಾ ಕಾಲುವೆ, ಸಾಲವಾಡಗಿ ಶಾಖಾ ಕಾಲುವೆ, ಟಕ್ಕಳಕಿ ಶಾಖಾ ಕಾಲುವೆ, ದಿಂಡವಾರ ಶಾಖಾ ಕಾಲುವೆ ಹಾಗೂ ಅದರಡಿಯಲ್ಲಿ ಬರುವ ಉಪ ಕಾಲುವೆಗಳ ಮೂಲಕ ಜಿಲ್ಲೆಯಲ್ಲಿ ಬರುವ ಸಣ್ಣ ನೀರಾವರಿ ಮತ್ತು ಜಿಪಂ ಕೆರೆಗಳನ್ನು ಕಾಲುವೆ ಜಾಲಗಳ ಕೊನೆಯ ಭಾಗದವರೆಗೆ ನೀರು ತಲುಪಿಸಲು ಮುಂಜಾಗ್ರತಾ ಕ್ರಮವಾಗಿ ಕಾಲುವೆಗಳ ಎಡ-ಬಲ 100 ಅಡಿ ವ್ಯಾಪ್ತಿಯಲ್ಲಿ ಅಕ್ಟೋಬರ್ 21 ರಿಂದ ನವೆಂಬರ್ 12ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts