More

    ಜನಮನ ಸೆಳೆದ ಮನಮೋಹಕ ನೃತ್ಯ

    ದಾವಣಗೆರೆ : ಇಸ್ಕಾನ್ ಸಂಸ್ಥೆಯಿಂದ ನಗರದ ತೊಗಟವೀರ ಕಲ್ಯಾಣ ಮಂಟಪದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಜನ ಮನ ಸೆಳೆಯಿತು.
     ಚೆನ್ನೈನಿಂದ ಆಗಮಿಸಿದ್ದ ಕಲಾವಿದೆ ಸ್ಮತಿ ಅವರ ಭರತನಾಟ್ಯ ಮನಮೋಹಕವಾಗಿತ್ತು. ಮೂಲತಃ ದಾವಣಗೆರೆ ಜಿಲ್ಲೆಯ ಜಗಳೂರಿನವರಾದ ಸ್ಮತಿ, ಪುರಂದರ ದಾಸರ ಜಗನ್ಮೋಹನನೇ ಕೃಷ್ಣ, ಶ್ರೀನಿವಾಸನ್ ಅವರ ಗೋದಾವರಿ, ಮಧುರೈ ಎನ್. ಕೃಷ್ಣನ್ ಅವರ ಮಧುರತಿಲ್ಲಾನ ಕೃತಿಗಳಿಗೆ ನೃತ್ಯ ಪ್ರದರ್ಶನ ನೀಡಿದರು. ಗೋದಾವರಿ ಕೃತಿಗೆ, ರಾಗ ಮಾಲಿಕೆ ರಾಗ ಆದಿತಾಳದಲ್ಲಿ ಅವರೇ ಸಂಯೋಜಿಸಿದ ನೃತ್ಯವಂತೂ ಭಾವಪೂರ್ಣವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts