More

    ಭಾಯಾಗಡದಲ್ಲಿ ಬಂಜಾರ ಸಂಸ್ಕೃತಿ ಅನಾವರಣ

    ಹೊನ್ನಾಳಿ : ಸೂರಗೊಂಡನಕೊಪ್ಪದ ಭಾಯಾಗಡದಲ್ಲಿ ಬುಧವಾರ ಬಂಜಾರ ಸಂಸ್ಕೃತಿ ಅನಾವರಣಗೊಂಡಿತು. ಹಾಡು, ಕುಣಿತ, ಭಜನೆ, ಪೂಜೆ, ಧ್ಯಾನ ಎಲ್ಲದರಲ್ಲೂ ಸಂತ ಸೇವಾಲಾಲರದೇ ಸ್ಮರಣೆ.
     ಆರಾಧ್ಯ ದೈವನ ಜಯಂತ್ಯುತ್ಸವಕ್ಕೆ ನಾಡಿನ ವಿವಿಧೆಡೆಯಿಂದ ಶ್ರದ್ಧೆ, ಭಕ್ತಿಯಿಂದ ಆಗಮಿಸಿದ್ದ ಸಮಾಜದವರು ಎಲ್ಲ ಆಚರಣೆಗಳಲ್ಲಿ ಸಂಭ್ರಮದಿಂದ ಪಾಲ್ಗೊಂಡರು. ವಿಶೇಷ ಸಾಂಪ್ರದಾಯಿಕ ಉಡುಗೆಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಪಾದಯಾತ್ರೆ ಮೂಲಕ ಆಗಮಿಸಿದ್ದ ಮಾಲಾಧಾರಿಗಳು ಮಾಡಿದ ನೃತ್ಯ ಆಕರ್ಷಕವಾಗಿತ್ತು.
     ಯುವ ಸಬಲೀಕರಣದ ಕುರಿತು ವಿಚಾರಗೋಷ್ಠಿ, ರಾಜ್ಯದ ಬಂಜಾರರ ಮುಂದಿರುವ ಸವಾಲು ಮತ್ತು ಪರಿಹಾರೋಪಾಯಗಳ ಬಗ್ಗೆ ವಿಚಾರ ಸಂಕೀರಣ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ರಂಗು ತುಂಬಿದವು.
     ಬೆಳಗ್ಗೆ ಸೇವಾಲಾಲ್ ಹಾಗೂ ಮರಿಯಮ್ಮ ದೇವಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಮಹಾ ಮಂಗಳಾರತಿ ನೆರವೇರಿದವು. ಸೇವಾಲಾಲ್ ಹಾಗೂ ಮರಿಯಮ್ಮ ದೇವಿ ಮೂರ್ತಿಗಳಿಗೆ ಬೆಳ್ಳಿ ಕವಚದೊಂದಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
     ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, 2013ರಲ್ಲಿ ಬಂಜಾರ ಸಮುದಾಯದ ಅಭಿವೃದ್ಧಿಗೆ ಬಹಳಷ್ಟು ಅನುದಾನ ನೀಡಿದ್ದೇನೆ. ಬಗರ್‌ಹುಕುಂ ಸಾಗುವಳಿದಾರರ ಮನವೊಲಿಸಿ 13 ಎಕರೆ ಜಾಗವನ್ನು ಕೊಡಿಸಿದ್ದೇನೆ ಎಂದರು.
     ಶಿವಮೊಗ್ಗದ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಮೊಟ್ಟ ಮೊದಲ ಬಾರಿಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 2 ಕೋಟಿ ರೂ. ಅನುದಾನ ನೀಡಿ ಸಂತ ಸೇವಾಲಾಲರ ಜಯಂತ್ಯುತ್ಸವಕ್ಕೆ ಅನುವು ಮಾಡಿಕೊಟ್ಟರು. ಭಾಯಾಗಡದಲ್ಲಿ ರೈಲು ನಿಲ್ದಾಣ ನಿರ್ಮಾಣ ಮಾಡಿಸುತ್ತಿದ್ದೇನೆ ಎಂದು ಹೇಳಿದರು.
     ಮಹಾರಾಷ್ಟ್ರದ ಪೌರಗಡ್‌ನ ಸೇವಾಲಾಲ್ ಜಗದ್ಗುರು ಬಾಬುಸಿಂಗ್ ಮಹಾರಾಜ್, ಸಾಲೂರು ಮಠದ ಸಿದ್ದಲಿಂಗ ದೇವರು, ಸೇನಾಭಗತ್ ಆಶೀರ್ವಚನ ನೀಡಿದರು. ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಪಿ.ಟಿ. ಪರಮೇಶ್ವರ ನಾಯ್ಕ, ಅಶೋಕ್ ನಾಯ್ಕ್, ಶಿವಮೂರ್ತಿ ನಾಯ್ಕ್, ಮುಖಂಡರಾದ ಡಾ.ಈಶ್ವರನಾಯ್ಕ್, ರಾಘವೇಂದ್ರ ನಾಯ್ಕ್, ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್, ಉಪ ವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ, ತಹಸೀಲ್ದಾರ್ ಗೋವಿಂದಪ್ಪ, ಪಟ್ಟರಾಜಗೌಡ, ಜಿ.ಎಸ್. ಅನಿತ್ ಕುಮಾರ್, ಮಾರುತಿ ನಾಯ್ಕ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts