More

    ಬಾಪೂಜಿ ಶಾಲೆಯಲ್ಲಿ ಕಾರ್ಗಿಲ್ ವಿಜಯೋತ್ಸವ

    ದಾವಣಗೆರೆ : ತ್ಯಾಗ, ಬಲಿದಾನ ಮಾಡಿದ ವೀರ ಯೋಧರ ಉಸಿರಿನಿಂದ ರಾಷ್ಟ್ರಧ್ವಜ ಬಾನಂಗಳದಲ್ಲಿ ಹಾರಾಡುತ್ತಿದೆ ಎಂದು ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತ ಕ್ಯಾಪ್ಟನ್ ನವೀನ್ ನಾಗಪ್ಪ ಅಣಬೇರು ಹೇಳಿದರು.
     ನಗರದ ಬಾಪೂಜಿ ಹೈಯರ್ ಪ್ರೈಮರಿ ಇಂಗ್ಲೀಷ್ ಮೀಡಿಯಂ (ಸಿಬಿಎಸ್‌ಇ) ಸ್ಕೂಲ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ  24ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
     ಯುದ್ಧಭೂಮಿಯಲ್ಲಿ ಒಂದೊಂದು ಸೆಕೆಂಡ್ ಸಹ ಅತಿ ಮುಖ್ಯ. ಶತ್ರುಗಳ ದಾಳಿ ಹಿಮ್ಮೆಟ್ಟಿಸಲು ಸದಾ ಮೈಯೆಲ್ಲ ಕಣ್ಣಾಗಿರಬೇಕು ಎಂದು ವಿದ್ಯಾರ್ಥಿಗಳೊಂದಿಗೆ ತಮ್ಮ ಅನುಭವ ಹಂಚಿಕೊಂಡರು.
     ಶಾಲೆಯ ಮುಖ್ಯಸ್ಥ ಮಂಜುನಾಥ ರಂಗರಾಜು ಮಾತನಾಡಿ, ಸೇನೆಗೆ ಸೇರಲು ಉತ್ಸಾಹ ಇರುವವರಿಗೆ ದೇಶಕ್ಕಾಗಿ ಹೋರಾಡಿದ  ಸೈನಿಕರನ್ನು ಶಾಲೆಗೆ ಕರೆಸಿ ವಿದ್ಯಾರ್ಥಿಗಳಿಗೆ ಪರಿಚಯಿಸುವ ಮೂಲಕ ಸ್ಫೂರ್ತಿ ನೀಡಲಾಗುತ್ತಿದೆ ಎಂದರು.
      ಪ್ರಾಂಶುಪಾಲೆ ಜೆ.ಎಸ್. ವನಿತಾ ಮಾತನಾಡಿ, ದೇಶದ ರಕ್ಷಣೆಗೆ ಪ್ರತಿಯೊಬ್ಬ ಯೋಧರ ಸೇವೆ ಅತ್ಯಮೂಲ್ಯ. ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸೈನ್ಯಕ್ಕೆ ಸೇರುವ ಮೂಲಕ ದೇಶ ಕಾಯುವಂತಹ ಪುಣ್ಯ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
     ಶೈಕ್ಷಣಿಕ ಮಾರ್ಗದರ್ಶಕ ಸಿ ಮಂಜಪ್ಪ, ಶಾಲಾ ಉಸ್ತುವಾರಿಗಳಾದ ಪಿ.ವಿ. ಪ್ರಭು, ಸವಿತಾ ರಮೇಶ್, ಶೀಭಾರಾಣಿ, ಸೌಮ್ಯ ಡಾ. ಶಂಕರ್‌ಮೂರ್ತಿ ಇತರರು ಇದ್ದರು. ಸಮಿತ ಎಸ್. ಮುತಾಲಿಕ್ ಪ್ರಾರ್ಥಿಸಿದರು. ಮಹಮ್ಮದ್ ಪುರಖಾನ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts