ಧಾರವಾಡ: ಪ್ರಿಯಕರನ ಜೊತೆ ಸೇರಿ ತಾಯಿಗೆ ಚೂರಿ ಇರಿದ ಅಪ್ರಾಪ್ತ ವಯಸ್ಸಿನ ಮಗಳು ನಂತರ ಆತನ ಜತೆ ಪರಾರಿಯಾಗಿರುವ ಆಘಾತಕಾರಿ ಘಟನೆ ಧಾರವಾಡದಲ್ಲಿ ನಡೆದಿದೆ.
ಜೀಜಾಬಾಯಿ ಚಾಕುವಿನಿಂದ ಇರಿತಕ್ಕೊಳಗಾದ ಮಹಿಳೆ, ಸದ್ಯ ಗಾಯಗೊಂಡಿರುವ ಈಕೆಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿ ಪರಶುರಾಮ ಹಾಗೂ ಈಕೆ ಕೆಲ ದಿನಗಳ ಹಿಂದೆ ಓಡಿಹೋಗಿದ್ದರು. ತನ್ನ ಮಗಳು ಇನ್ನೂ ಅಪ್ರಾಪ್ತೆಯಾಗಿದ್ದು, ಆಕೆಯನ್ನು ನಮಗೆ ಒಪ್ಪಿಸಬೇಕೆಂದು ಜೀಜಾಬಾಯಿ ದೂರು ದಾಖಲಿಸಿದ್ದರು. ಈ ಬಳಿಕ ಪತ್ತೆಯಾದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈಕೆ ಅಪ್ರಾಪ್ತ ವಯಸ್ಸಿನವಳಾಗಿದ್ದರಿಂದ ಬಾಲಭವನದಲ್ಲಿ ಇರಿಸಲಾಗಿತ್ತು.
ತಮ್ಮ ಮೇಲೆ ದೂರು ನೀಡಿದ್ದರಿಂದ ತಾಯಿ ಮೇಲೆ ಕೋಪಗೊಂಡಿದ್ದ ಈ ಜೋಡಿ, ನಂತರ ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯ ಬಗ್ಗೆ ಮನೆಯಲ್ಲಿ ವಿರೋಧ ವ್ಯಕ್ತವಾಗಿದೆ. ಅಪ್ರಾಪ್ತೆಯಾಗಿರೋ ಕಾರಣಕ್ಕೆ ಪ್ರಿಯಕರ ಪರಶುರಾಮನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಎರಡು ತಿಂಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದ ಪರಶುರಾಮ, ಮನೆಗೆ ಬಂದು ದಾಳಿ ನಡೆಸಿದ್ದಾನೆ. ಈ ವೇಳೆ ತನ್ನ ತಾಯಿಯ ಮೇಲೆ ಚಾಕು ಇರಿದು ಆತನೊಂದಿಗೆ ಪರಾರಿಯಾಗಿದ್ದಾಳೆ. (ದಿಗ್ವಿಜಯ ನ್ಯೂಸ್)
ಅಕ್ರಮ ವಲಸಿಗರಿಗೆ ಆಧಾರ್ ಪೂರೈಸುತ್ತಿದ್ದ ಜಾಲ ಪತ್ತೆ; ಹಲವರು ವಶಕ್ಕೆ, ಪೊಲೀಸರ ಕಾರ್ಯಕ್ಕೆ ಗೃಹಸಚಿವರಿಂದ ಶ್ಲಾಘನೆ