ಚಿಕ್ಕಮಗಳೂರು: ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಹಚ್ಚಹಸುರಿನ ಧಾರ್ವಿುಕ ತಾಣ ದತ್ತಪೀಠದಲ್ಲಿ ಪೂಜೆ ಸಲ್ಲಿಸಲು ಹಿಂದು, ಮುಸ್ಲಿಮರಿಬ್ಬರಿಗೂ ಅವಕಾಶ ಕಲ್ಪಿಸುವ ಮೂಲಕ 50 ವರ್ಷಗಳ ವಿವಾದಕ್ಕೆ ‘ಸೌಹಾರ್ದಯುತ ಪರಿಹಾರ’ ಮಾರ್ಗವನ್ನು ರಾಜ್ಯ ಸರ್ಕಾರ ಕಂಡುಕೊಂಡಿತ್ತು.
ನ.30ರಂದು ಬಾಬಾಬುಡನ್ ಗಿರಿಯ ದತ್ತಪೀಠದಲ್ಲಿ ಡಿಸೆಂಬರ್ 6, 7, 8 ರಂದು ದತ್ತ ಜಯಂತಿ ಆಚರಿಸಲು ಹೈಕೋರ್ಟ್ ಅನುಮತಿ ನೀಡಿತ್ತು. ಇದೀಗ ದತ್ತಾತ್ರೇಯ ಪೀಠಕ್ಕೆ ಅರ್ಚಕರ ನೇಮಕ ಆಗಿದ್ದು ಹಿಂದು ಸಂಘಟನೆಗಳು ಸಂಭ್ರಮಿಸಿವೆ.
ಇನಾಂ ದತ್ತಾತ್ರೇಯ ಪೀಠದಲ್ಲಿ ಅರ್ಚಕರ ನೇಮಕವಾಗಿದ್ದು. ವಿಎಚ್ಪಿ, ಬಜರಂಗದಳ ಸಂಭ್ರಮಾಚರಣೆ ನಡೆಸಿವೆ. ನಗರದ ಆಜಾದ್ ಪಾರ್ಕ್ನಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಎಚ್ಪಿ, ಬಜರಂಗದಳ ಹಾಗೂ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದ್ದಾರೆ.
ಶೃಂಗೇರಿ ಮೂಲದ ಶ್ರೀಕಾಂತ್ ಹಾಗೂ ಚಿಕ್ಕಬಳ್ಳಾಪುರ ದ ಸಂದೀಪ್ ಅರ್ಚಕರಾಗಿ ನೇಮಕರಾಗಿದ್ದಾರೆ. ಇವರನ್ನು ವ್ಯವಸ್ಥಾಪನ ಸಮಿತಿ ಶಿಫಾರಸು ಮೇರೆಗೆ ನೇಮಕ ಮಾಡಿತ್ತು. ಈಗ ಅರ್ಚಕರ ಸಮ್ಮುಖದಲ್ಲಿ ಈ ಬಾರಿ ದತ್ತಜಯಂತಿ ಫಿಕ್ಸ್ ಆಗಿದೆ.