More

    ದಾಸರಹಳ್ಳಿ ಈ ಬಾರಿ ಕಾಂಗ್ರೆಸ್ ವಶ

    ಧನಂಜಯಗೌಡ ವಿಶ್ವಾಸ | ಮತದಾರರಿಂದ ಅಭೂತಪೂರ್ವ ಬೆಂಬಲ

    ಪೀಣ್ಯದಾಸರಹಳ್ಳಿ: ದಾಸರಹಳ್ಳಿ ಕ್ಷೇತ್ರದ ಜನತೆ ಕಳೆದ ಹಲವು ದಶಕಗಳಿಂದ ಬಿಜೆಪಿ ಮತ್ತು ಜೆಡಿಎಸ್ ಶಾಸಕರ ಆಡಳಿತ ವೈಖರಿ ನೋಡಿದ್ದು, ಅಭಿವೃದ್ಧಿಗಿಂತ ಅಬ್ಬರದಲ್ಲೇ ಕಾಲ ಕಳೆಯುವ ಈ ಎರಡು ಪಕ್ಷಗಳನ್ನು ತಿರಸ್ಕರಿಸಿ ಕಾಂಗ್ರೆಸ್ ಆಯ್ಕೆ ಮಾಡಲಿದ್ದಾರೆ. ಈ ಬಾರಿ ದಾಸರಹಳ್ಳಿ ‘ಕೈ’ವಶವಾಗುವುದರಲ್ಲಿ ಸಂದೇಹವೇ ಇಲ್ಲ ಕೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಜಿ. ಧನಂಜಯ ಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಕ್ಷೇತ್ರದ ಚಿಕ್ಕಬಾಣಾವರ ನಗರ ಸಭೆ ವ್ಯಾಪ್ತಿಯ ಗಣಪತಿ ನಗರ, ರಾಘವೇಂದ್ರ ಬಡಾವಣೆ, ದ್ವಾರಕಾ ನಗರ, ನಂದಿನಗರ, ಕೆರೆ ಗುಡ್ಡದಹಳ್ಳಿ ಸೇರಿ ವಿವಿಧ ಬಡಾವಣೆಗಳಲ್ಲಿ ಬೃಹತ್ ರೋಡ್ ಶೋ ಮೂಲಕ ಪ್ರಚಾರ ನಡೆಸಿ ಮತ ಯಾಚಿಸಿದರು. ಕೇತ್ರದಲ್ಲಿ ನಮಗೆ ಬಿಜೆಪಿ ಪ್ರತಿಸ್ಪರ್ಧಿಯೇ ಹೊರತು ಜೆಡಿಎಸ್ ಅಲ್ಲ. ಕಳೆದ ಐದು ವರ್ಷ ಅಧಿಕಾರದಲ್ಲಿದ್ದ ಜೆಡಿಎಸ್‌ ಶಾಸಕರು ಯಾವುದೇ ರೀತಿಯ ಅಭಿವೃದ್ಧಿ ಮಾಡದೆ ವೃಥಾ ಕಾಲಹರಣ ಮಾಡಿ ಕ್ಷೇತ್ರವನ್ನು ಅಭಿವೃದ್ಧಿ ಶೂನ್ಯತೆಯ ಕೂಪಕ್ಕೆ ತಳ್ಳಿದ್ದಾರೆ ಎಂದರು.

    ಜನಸಾಮಾನ್ಯರ ಕೈಗೆ ಸಿಗದ ಇವರ ಆಡಳಿತ ವೈಖರಿಯನ್ನು ದಾಸರಹಳ್ಳಿಯ ಜನತೆ ಚೆನ್ನಾಗಿಯೇ ನೋಡಿದ್ದಾರೆ. ಕ್ಷೇತ್ರದ ಸಾಕಷ್ಟು ಜನ ತಮ್ಮ ಸಂಕಷ್ಟ ಹೇಳಿಕೊಳ್ಳಲು ಅವರ ಕಚೇರಿಗೆ ಅಲೆದು, ಪರಿಹಾರ ಸಿಗದೆ ಬರಿಯ ಓಡಾಟವೇ ಗಟ್ಟಿ ಎಂದುಕೊಂಡು ಬೇಸರದಿಂದ ಹಿಂತಿರುಗಿ ಬಂದಿರುವ ಸಾಕಷ್ಟು ಉದಾಹರಣೆಗಳಿವೆ. ಇದೀಗ ಕಾಂಗ್ರೆಸ್‌ನತ್ತ ಒಲವು ತೋರಿ ನಮ್ಮೊಂದಿಗೆ ಬಂದಿದ್ದಾರೆ ಎಂದು ಹೇಳಿದರು.

    ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ದಾಸರಹಳ್ಳಿ ಕ್ಷೇತ್ರದಲ್ಲಿಯೂ ಕಾಂಗ್ರೆಸ್‌ ಗೆಲುವು ಸಾಧಿಸಲಿದೆ. ದಾಸರಹಳ್ಳಿಯ ಸರ್ವಾಂಗೀಣ ಪ್ರಗತಿಗಾಗಿ ಅಗತ್ಯ ಅನುದಾನ ತಂದು ಕ್ಷೇತ್ರದಲ್ಲಿ ಮಾದರಿ ಪ್ರಗತಿ ಕಾರ್ಯ ಕೈಗೊಳ್ಳುತ್ತೇನೆ, ಮಾದರಿ ದಾಸರಹಳ್ಳಿ ಕ್ಷೇತ್ರ ನನ್ನ ಕನಸಾಗಿದ್ದು, ನಿಮ್ಮೆಲ್ಲರ ಸಹಕಾರ, ಬೆಂಬಲದ ಅಗತ್ಯವಿದೆ. ಕಾಂಗ್ರೆಸ್ ಪಕ್ಷ ರಾಜ್ಯದ ಬಡವರು, ನಿರುದ್ಯೋಗಿ ಯುವಕರು, ಮಹಿಳೆಯರ ಕಲ್ಯಾಣಕ್ಕಾಗಿ ಮತ್ತು ನೆಮ್ಮದಿಯ ಬದುಕಿಗಾಗಿ ವಿನೂತನ ಮತ್ತು ಜನಪರವಾದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಜನರ ಬದುಕಿನಲ್ಲಿ ಹೊಸ ಚೈತನ್ಯ ಮೂಡಿಸಿದೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಆಡಳಿತದಿಂದ ಬೇಸತ್ತಿರುವ ರಾಜ್ಯದ ಜನತೆ ಈ ಬಾರಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ನೀಡುವ ವಿಶ್ವಾಸವಿದೆ ಎಂದರು. ಕಾಂಗ್ರೆಸ್ ಮುಖಂಡರಾದ ಕೆ. ನಾಗಭೂಷಣ್, ಕೆ.ಸಿ. ಅಶೋಕ್‌ ಸೇರಿ ಹಲವು ಮುಖಂಡರು ಹಾಗೂ ಕಾರ್ಯಕರ್ತರಿದ್ದರು.

    ವಿದ್ಯಾವಂತ ಯುವಕನಿಗೆ ಜನಬೆಂಬಲ
    ದಾಸರಹಳ್ಳಿ ಕ್ಷೇತ್ರದ ಜನತೆ ಕಳೆದ ಹಲವು ವರ್ಷಗಳಿಂದ ಬಿಜೆಪಿ ಮತ್ತು ಜೆಡಿಎಸ್ ಶಾಸಕರ ಕಾರ್ಯವೈಖರಿಯನ್ನು ಸನಿಹದಿಂದ ನೋಡಿದ್ದು, ಈ ಬಾರಿ ಅಭಿವೃದ್ಧಿಯ ಹೊಸ ಚಿಂತನೆಯುಳ್ಳ ವಿದ್ಯಾವಂತ ಯುವಕನನ್ನು ಬೆಂಬಲಿಸಲು ನಿರ್ಧರಿಸಿದಂತೆ ಕಾಣುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಜಿ. ಧನಂಜಯಗೌಡ ಪ್ರಚಾರಕ್ಕೆ ತೆರಳಿದೆಲ್ಲೆಡೆ ಸೇರುತ್ತಿರುವ ಜನಸ್ತೋಮ, ಅವರು ತೋರುತ್ತಿರುವ ಉತ್ಸಾಹವೇ ಇದಕ್ಕೆ ಸಾಕ್ಷಿ. ದಾಸರಹಳ್ಳಿ ಕ್ಷೇತ್ರದ ಕಾಂಗ್ರೆಸ್‌ ಮುಖಂಡರು, ಯುವಕರು, ಪ್ರಜ್ಞಾವಂತ ನಾಗರಿಕರು ಅತ್ಯುತ್ಸಾಹದಿಂದ ಕ್ಷೇತ್ರದಾದ್ಯಂತಧನಂಜಯಗೌಡ ಪರ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ಈ ಬಾರಿ ಪ್ರಗತಿಗೆ ಇಂಬು ನೀಡುವ ಪ್ರಜ್ಞಾವಂತ, ವಿದ್ಯಾವಂತ, ಉತ್ಸಾಹಿ ಯುವಮುಖಂಡ ಜಿ. ಧನಂಜಯಗೌಡ ಅವರನ್ನು ಬೆಂಬಲಿಸಿ ವಿಧಾನಸಭೆಗೆ ಆಯ್ಕೆ ಮಾಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts