ದರ್ಶನ್ ಅವರ ಬಳಿ ಎರಡು ದಶಕಗಳಿಂದ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ್ ಇಂದು ಹೃದಯಘಾತದಿಂದ ನಿಧನರಾಗಿದ್ದಾರೆ.
ಇದನ್ನೂ ಓದಿ: ಚಿತ್ರಮಂದಿರ ತೆರೆಯುವಿಕೆಗೆ ಗ್ರೀನ್ ಸಿಗ್ನಲ್!; ಕೇಂದ್ರ ಸರ್ಕಾರ ನಿಗದಿಪಡಿಸಿದ ದಿನಾಂಕ ಯಾವುದು?
ದರ್ಶನ್ ಚಿತ್ರರಂಗಕ್ಕೆ ಬಂದಾಗಿನಿಂದಲೂ, ಶ್ರೀನಿವಾಸ್ ಅವರಿಗೆ ಮೇಕಪ್ ಮಾಡುತ್ತಿದ್ದರು. ಶ್ರೀನಿವಾಸ್ ಅವರ ನಿಧನಕ್ಕೆ ದರ್ಶನ್ ಕಂಬನಿ ಮಿಡಿದಿದ್ದಾರೆ. ಅಷ್ಟೇ ಅಲ್ಲ, ದರ್ಶನ್ ಅವರ ಅಭಿಮಾನಿಗಳು ಸಹ ಸೋಷಿಯಲ್ ಮೀಡಿಯಾದಲ್ಲಿ ಶ್ರೀನಿವಾಸ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾಥಿರ್ಸಿದ್ದಾರೆ.
ಶ್ರೀನಿವಾಸ್ ಸಾವಿನ ಕುರಿತು ಟ್ವೀಟ್ ಮಾಡಿರುವ ದರ್ಶನ್, ‘ಎರಡು ದಶಕಗಳಿಂದ ನನ್ನ ಬಳಿ ಮೇಕಪ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸೀನ ಅಲಿಯಾಸ್ ಶ್ರೀನಿವಾಸ್ ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿನ ರಿಷಿ ಕಪೂರ್ ಪೂರ್ವಜರ ಹವೇಲಿಗೆ ಎದುರಾಯ್ತು ಕಂಟಕ; ಭೂತ ಪ್ರೇತದ ವದಂತಿ!
ದರ್ಶನ್ ಅಭಿನಯದ ಹಲವು ಚಿತ್ರಗಳಲ್ಲಿ ಅವರಿಗೆ ಮೇಕಪ್ ಮಾಡಿದ್ದ ಶ್ರೀನಿವಾಸ್, ಬೇರೆ ಚಿತ್ರಗಳಿಗೂ ಕೆಲಸ ಮಾಡಿದ್ದರು. ಶ್ರೀಮುರಳಿ ಅಭಿನಯದ ‘ಮದಗಜ’ಕ್ಕೂ ಅವರು ಮೇಕಪ್ ಕಲಾವಿದನಾಗಿ ಕೆಲಸ ಮಾಡಿದ್ದು, ಆ ಚಿತ್ರತಂಡ ಸಹ ಸಂತಾಪ ಸೂಚಿಸಿದೆ.
VIDEO: ಶಿವಣ್ಣ ಬರ್ತ್ಡೇಗೆ ಸಂಯುಕ್ತಾ ಹೆಗ್ಡೆ ಡಿಫರೆಂಟ್ ವಿಶ್ ಹೇಗಿದೆ ನೋಡಿ…