ಗುಂಡ್ಲುಪೇಟೆ: ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಇತ್ತೀಚೆಗಷ್ಟೇ ತಮ್ಮ ಸ್ನೇಹಿತರ ಜತೆ ಮತ್ತೊಮ್ಮೆ ಕೊಡಗಿಗೆ ಜಾಲಿ ರೈಡ್ ಹೋಗಿದ್ದರು. ಎರಡು ದಿನಗಳ ಹಿಂದಷ್ಟೇ ಅವರು ತಮ್ಮ ಸ್ನೇಹಿತರೊಂದಿಗೆ ಕೇರಳಕ್ಕೆ ಪ್ರವಾಸಕ್ಕೆ ಹೋಗಿದ್ದು, ಇದೀಗ ವಾಪಸ್ಸಾಗಿದ್ದಾರೆ. ದರ್ಶನ್, ಪ್ರಜ್ವಲ್ ದೇವರಾಜ್, ಚಿಕ್ಕಣ್ಣ, ಪನ್ನಗಾಭರಣ ಸೇರಿದಂತೆ 18 ಬೈಕ್ಗಳಲ್ಲಿ ಕೇರಳದಿಂದ ಮೂಲೆಹೊಳೆ ಚೆಕ್ಪೋಸ್ಟ್ ಮೂಲಕ ರಸ್ತೆ ಮಾರ್ಗವಾಗಿ ಆಗಮಿಸಿದ ದರ್ಶನ್ ಜತೆ ಫೋಟೋ ತೆಗೆಸಿಕೊಳ್ಳಲು ಚೆಕ್ಪೋಸ್ಟ್ ನಲ್ಲಿದ್ದ ಅರಣ್ಯ ಹಾಗೂ ಪೊಲೀಸ್ ಸಿಬ್ಬಂದಿ ಮತ್ತು ಅಭಿಮಾನಿಗಳು ಮುಗಿಬಿದ್ದರು. ಅಭಿಮಾನಿಗಳ ಜತೆ ಸೆಲ್ಫಿಗೆ ಪೋಸ್ ಕೊಟ್ಟು ನಂಜನಗೂಡು ಮಾರ್ಗವಾಗಿ ಟಿ.ನರಸೀಪುರದಲ್ಲಿರುವ ಫಾರಂ ಹೌಸ್ಗೆ ದರ್ಶನ್ ಮತ್ತು ಸ್ನೇಹಿತರು ವಾಪಸಾಗಿದ್ದಾರೆ.
ಕರೊನಾ ವಾಕ್ಸಿನ್ ಹಾಕಿಸಿಕೊಂಡ ನಂತರ ಈಕೆಯ ಧ್ವನಿ ಪುರುಷರ ಧ್ವನಿಯಂತಾಯ್ತು!
‘ಪೊಂಗಲ್’ಗೆ 2,500 ರೂ. ಕೊಡ್ತಾರಂತೆ ಸಿಎಂ; ಪಡೆಯಲು ಪಡಿತರ ಚೀಟಿ ಇದ್ರಾಯ್ತು…
ಲಗ್ನ ಪತ್ರಿಕೆ ಜತೆ ವೈನ್ ಬಾಟಲ್, ಸ್ನಾಕ್ಸ್ ಫ್ರೀ! ಮದುವೆ ಬೇಡ ಲಗ್ನ ಪತ್ರಿಕೆ ಬೇಕೆಂದ ಜನರು!