More

    45 ದಿನದೊಳಗೆ ಗಂಡಾಂತರ..ವಿನಯ್ ಗುರೂಜಿ ಹೆಸರಿನ ಫೇಕ್ ಅಕೌಂಟ್​​ನಿಂದ ಮೆಸೇಜ್​!

    ಚಿಕ್ಕಮಗಳೂರು: ಅವಧೂತ ವಿನಯ್ ಗುರೂಜಿ ಹೆಸರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಫೇಕ್ ಅಕೌಂಟ್ ಮೂಲಕವಾಗಿ ಕಿಡಿಗೇಡಿಗಳು ಭಯ ಹುಟ್ಟಿಸುವ ಸಂದೇಶ ಕಳಿಸುತ್ತಿದ್ದಾರೆ.

    ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಗೌರಿಗದ್ದೆ ಆಶ್ರಮದ ಅವಧೂತ ವಿನಯ್ ಗುರೂಜಿ ಹೆಸರಲ್ಲಿ ಕಿಡಿಗೆಡಿಗಳು ಸೋಶಿಯಲ್​ ಮೀಡಿಯಾ ಬಳಕೆದಾರರಿಗೆ ಸಂದೇಶ ಕಳಹಿಸಿ ಭಯ ಹುಟ್ಟಿಸುತ್ತಿದ್ದಾರೆ. 45 ದಿನದೊಳಗೆ ನಿಮಗೆ ಗಂಡಾಂತರ ಅನ್ನೋ ರೀತಿ ಮೆಸೇಜ್​​ಗಳನ್ನು ಕಳುಹಿಸಿ ಭಯ ಹುಟ್ಟಿಸಿ ನಂತರ ಹಣವಸೂಲಿ ಮಾಡುತ್ತಿರುವ ಅರೋಪ ಕೇಳಿ ಬಂದಿದೆ.

    ಇದನ್ನೂ ಓದಿ: ವಾತಾವರಣದ ವಿಚಿತ್ರ ಆಟ; ಈ ಬಾರಿ ಬೆಂಗಳೂರಲ್ಲಿ ಗಾಳಿ ಮಳೆಗೆ ಮರಗಳು ಉರುಳಿದ್ದು ಯಾಕೆ ಗೊತ್ತಾ?

    ಆಶ್ರಮಕ್ಕೂ ಈ ಅಕೌಂಟ್​ಗೆ ಯಾವುದೇ ಸಂಬಂಧವಿಲ್ಲ‌‌. ಈ ರೀತಿ ನಕಲಿ ಖಾತೆಯಿಂದ ಯಾವುದೇ ಸಂದೇಶ ನಿಮಗೆ ಬಂದಿದ್ದು, ಹಣ ಕೇಳಿದರೆ ದೂರು ನೀಡಿ ಎಂದು ಆಶ್ರಮ ಮನವಿ ಮಾಡಿದೆ. ಈ ವಿಚಾರವಾಗಿ ಆಶ್ರಮ ಕಾನೂನು ಕ್ರಮಕ್ಕೆ ದೂರು ನೀಡಲು ಮುಂದಾಗಿದೆ.

    ಐಪಿಎಸ್​ ಅಧಿಕಾರಿ ಜತೆ ಡಿಂಪಲ್​ ಹಯಾತಿ ಅನುಚಿತ ವರ್ತನೆ: ಕ್ರಿಮಿನಲ್​ ಪ್ರಕರಣ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts