More

    ಕಂಜಿಲಗುಡ್ಡೆಯ ಓಂಹರಿ ಫ್ರೆಂಡ್ಸ್ ಸದಸ್ಯರಿಂದ ಹೀಗೊಂದು ಮಾದರಿ ಕಾರ್ಯ

    ಗುರುಪುರ: ಮಲ್ಲೂರು- ಬಿ.ಸಿ.ರೋಡ್ ಸಂಪರ್ಕಿಸುವ ಮುಖ್ಯ ರಸ್ತೆಯ ಬೆಂಜನಪದವು-ನೀರುಮಾರ್ಗ ಮಧ್ಯೆ ಸುಮಾರು ಎರಡು ಕಿ.ಮೀ. ರಸ್ತೆ ಸಂಪೂರ್ಣ ಕಿತ್ತು ಹೋಗಿ ಗುಂಡಿಯಾಗಿದ್ದು, ಭಾನುವಾರ ಸ್ಥಳೀಯ ಕಂಜಿಲಗುಡ್ಡೆಯ ಓಂಹರಿ ಫ್ರೆಂಡ್ಸ್ ಸದಸ್ಯರು ರಸ್ತೆಗೆ ಕಲ್ಲು, ಜಲ್ಲಿ ಹುಡಿ ತುಂಬಿಸಿ ಸಮತಟ್ಟುಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.

    ಮಳೆಗಾಲ ಆರಂಭದಲ್ಲೇ ಈ ರಸ್ತೆ ಸಂಪೂರ್ಣ ಕಿತ್ತು ಹೋಗಿತ್ತು. ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ರಸ್ತೆ ಹೊಂಡದಂತಾಗಿದ್ದು ವಾಹನ ಸಂಚಾರ ದುಸ್ತರವಾಗಿತ್ತು. ಹೊಂಡಗಳಲ್ಲಿ ಕೆಸರು ನೀರು ತುಂಬಿದ್ದು, ಈಗಾಗಲೇ ಕೆಲವು ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಸವಾರರು ಗಾಯಗೊಂಡಿದ್ದಾರೆ. ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರ ದೂರಿದ್ದಾರೆ.

    ಈ ಮಾರ್ಗವಾಗಿ ಇಂಜಿನಿಯರಿಂಗ್ ಕಾಲೇಜು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ನಿತ್ಯದ ಪ್ರಯಾಣಿಕರಿಗೆ ಸರ್ವೀಸ್ ಬಸ್ ವ್ಯವಸ್ಥೆ ಇದ್ದು, ರಸ್ತೆ ಗುಂಡಿಯಿಂದ ಕೆಲಮೊಮ್ಮೆ ಬಸ್‌ಗಳ ಟ್ರಿಪ್ ಕಟ್ ಆಗುತ್ತಿದೆ. ಇದರಿಂದ ಈ ಭಾಗದ ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.

    ಜಿಲ್ಲಾಡಳಿತ ತಕ್ಷಣ ಎಚ್ಚೆತ್ತುಕೊಳ್ಳಲಿ

    ಸಾರ್ವಜನಿಕರ ತೊಂದರೆ ಪರಿಗಣಿಸಿದ ಸ್ಥಳೀಯ ಕ್ಲಬ್ ಸದಸ್ಯರು ಭಾನುವಾರ ಶ್ರಮದಾನದ ಮೂಲಕ ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡಿದ್ದಾರೆ. ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಕಲ್ಲು, ಜಲ್ಲಿ ಹುಡಿ ಕಿತ್ತು ಹೋಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಆದ್ದರಿಂದ ಜಿಲ್ಲಾಡಳಿತ ತಕ್ಷಣ ಎಚ್ಚೆತ್ತುಕೊಂಡು ರಸ್ತೆ ದುರಸ್ತಿ ಕಾರ್ಯ ನಡೆಸಬೇಕು ಎಂದು ಈ ಭಾಗದ ಬಸ್ ಪ್ರಯಾಣಿಕರು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts