More

    ಸಾವಾಗಿದೆ ಸ್ವಲ್ಪ ನಿಲ್ಲಿ ಎಂದ ದಲಿತನನ್ನು ಠಾಣೆಗೊಯ್ದು ತಲೆ ಬೋಳಿಸಿದರು…! ವೈಎಸ್​ಆರ್​ಸಿ ನಾಯಕನ ಪವರ್​ ಖದರ್​

    ಹೈದರಾಬಾದ್​: ಮನೆ ಬಳಿ ಸಾವಾಗಿದೆ. ಶವ ತೆಗೆಯುವವರೆಗೆ ಸ್ವಲ್ಪ ನಿಲ್ಲಿ ಎಂದು ಮರಳು ಸಾಗಿಸುತ್ತಿದ್ದ ಲಾರಿಯನ್ನು ತಡೆದಿದ್ದೇ ಆತನ ತಪ್ಪಾಯಿತು. ಆ ದಲಿತ ಯುವಕ ಠಾಣೆಯಲ್ಲಿ ಇನ್ನಿಲ್ಲದ ಹಿಂಸೆ ಅನುಭವಿಸಬೇಕಾಯಿತು.

    ಸೀತಾನಗರಂ ಪೊಲೀಸ್​ ಠಾಣೆ ವ್ಯಾಪ್ತಿಯ ವೆಡಲಪಲ್ಲಿ ಗ್ರಾಮದಲ್ಲಿ ಮರಳು ವರಪ್ರಸಾದ್​ ಹಾಗೂ ಇತರ ಮೂವರ ಸೇರಿ ಮರಳು ಲಾರಿಯನ್ನು ತಡೆದು ನಿಲ್ಲಿಸಿದ್ದರು. ಆ ಮರಳು ಲಾರಿ ಆಡಳಿತಾರೂಢ ವೈಎಸ್​ಆರ್​ ಕಾಂಗ್ರೆಸ್​ ನಾಯಕನಿಗೆ ಸೇರಿದ್ದಾಗಿತ್ತು. ಹೀಗಾಗಿ ಆತನೇ ಸ್ಥಳಕ್ಕೆ ಬಂದು ಗದ್ದಲ ನಡೆಸಿದ್ದಾನೆ. ದಾರಿ ಬಿಡುವಂತೆ ಧಮ್ಕಿ ಹಾಕಿದ್ದಾನೆ.

    ಇದನ್ನೂ ಓದಿ; ಬಂಗಾಳದಲ್ಲಿ ಬಂಗಾಳಿಗಳ ಆಡಳಿತವಿರಬೇಕೆ ಹೊರತು ಗುಜರಾತಿಗಳದ್ದಲ್ಲ…!

    ಮರುದಿನ ಗ್ರಾಮಕ್ಕೆ ಬಂದ ಎಸ್​ಐ ಶೇಖ್​ ಫಿರೋಜ್​ ಶಾ ಹಾಗೂ ಪೊಲೀಸರ ವರಪ್ರಸಾದ್​ನನ್ನು ಠಾಣೆಗೆ ಕರೆದೊಯ್ದಿದ್ದಾರೆ. ಭಾರಿ ಹಿಂಸೆ ನೀಡಿದ್ದಾರೆ. ಬೆಲ್ಟ್​ನಿಂದ ಥಳಿಸಿದ್ದಾರೆ. ಕ್ಷೌರಿಕನನ್ನು ಕರೆಯಿಸಿ ನನ್ನ ತಲೆ ಬೋಳಿಸಿದ್ದಾರೆ. ಮೀಸೆಯನ್ನು ಕತ್ತರಿಸಿದ್ದಾರೆ ಎಂದು ವರಪ್ರಸಾದ್​ ಆರೋಪಿಸಿದ್ದಾರೆ.

    ಪೊಲೀಸರ ಕ್ರಮಕ್ಕೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಎಸ್​ಐ ಹಾಗೂ ಮತ್ತೊಬ್ಬ ಪೇದೆ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದ ಇಬ್ಬರನ್ನೂ ವಜಾ ಮಾಡಲಾಗಿದೆ. ಜತೆಗೆ, ಘಟನೆ ಬಗ್ಗೆ ಹಿರಿಯ ಪೊಲೀಸ್​ ಅಧಿಕಾರಿಗಳು ವಿಷಾದ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ; ಟಾಟಾ ಟ್ರಸ್ಟ್​ಗಳಿಗೆ ಕುಟುಂಬದ ಹೊರಗಿನವರು ಉತ್ತರಾಧಿಕಾರಿಯಾಗಬಹುದು; ರತನ್ ಟಾಟಾ ಸ್ಪಷ್ಟನೆ

    ಅಕ್ರಮ ಮರಳು ಸಾಗಣೆ ವಿರುದ್ಧ ಸಿಡಿದು ನಿಂತಿದ್ದಕ್ಕೆ ದಲಿತನ ಮೇಲೆ ದೌರ್ಜನ್ಯ ಎಸಗಲಾಗಿದೆ. ಪೊಲೀಸರು ಆಡಳಿತಾರೂಢ ಪಕ್ಷದ ನಾಯಕರ ಕೈಗೊಂಬೆಗಳಾಗಿ ವರ್ತಿಸುವುದು ಬೇಡ ಎಂದು ಮಾಜಿ ಸಿಎಂ ಚಂದ್ರಬಾಬು ನಾಯ್ಡು ಟೀಕಿಸಿದ್ದಾರೆ.

    ಈ ರಾಸಾಯನಿಕವಿರುವ ಹ್ಯಾಂಡ್​ ಸ್ಯಾನಿಟೈಸರ್​ ಬಳಸದಿರಿ…! ಎಚ್ಚರ ಜೀವಕ್ಕೆ ಅಪಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts