‘ಸೂರ್ಯ’. ಸದ್ಯ ಸ್ಯಾಂಡಲ್ವುಡ್ನಲ್ಲಿ ಸೆಟ್ಟೇರಲು ಸಿದ್ಧತೆ ನಡೆಸುತ್ತಿರುವ ಚಿತ್ರ. ‘ಸೂರ್ಯ’ ಟೈಟಲ್ಗೆ ‘ಪವರ್ ಆಫ್ ಲವ್’ ಟ್ಯಾಗ್ಲೈನ್. ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರ ಎನ್ನುವುದಕ್ಕೆ ಇಷ್ಟು ಸಾಕು. ಚಿತ್ರಕ್ಕೆ ಸಾಗರ್ ಆಕ್ಷನ್ ಕಟ್ ಹೇಳುತ್ತಿದ್ದು, ಇದು ಅವರ ಚೊಚ್ಚಲ ಪ್ರಯತ್ನ. ಆದರೆ ಹಿರಿಯ ನಿರ್ದೇಶಕ, ಕಲಾವಿದ ಬಿ. ಸುರೇಶ್ ಅವರ ಜೊತೆ ಸಾಕಷ್ಟು ವರ್ಷ ನಿರ್ದೇಶನ ವಿಭಾಗದಲ್ಲಿ ಕೆಲಸಮಾಡಿ ಅನುಭವ ಪಡೆದಿದ್ದಾರೆ ಸಾಗರ್. ಯುವ ಪ್ರತಿಭೆ ಪ್ರಶಾಂತ್ ಈ ಚಿತ್ರದ ನಾಯಕ ನಟ. ಹೆಸರಿನಷ್ಟೇ ಪವರ್ಫುಲ್ ಕಥೆಯನ್ನು ಸಿದ್ಧಪಡಿಸಿಕೊಂಡು ಆ್ಯಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ ಡೈರೆಕ್ಟರ್ ಸಾಗರ್.
ಇದನ್ನೂ ಓದಿ.ಕನ್ನಡದವರನ್ನು ನೋಡಿದರೆ ಹೊಟ್ಟೆಕಿಚ್ಚು!; ‘ಕೆಜಿಎಫ್’ ಹೊಗಳಿದ ಮಹೇಶ್ ಮಂಜ್ರೇಕರ್
ಇತ್ತೀಚೆಗಷ್ಟೇ ‘ಸೂರ್ಯ’ ಚಿತ್ರದ ಫಸ್ಟ್ ಲುಕ್ ಅನಾವರಣಗೊಂಡಿದ್ದು, ಡಾಲಿ ಧನಂಜಯ್ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈದ್ದಾರೆ. ಚಿತ್ರದ ಪೋಸ್ಟರ್ ಹಾಗೂ ಯುವ ಪ್ರತಿಭೆಗಳ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಡಾಲಿ ಧನಂಜಯ. ಲವ್, ಆ್ಯಕ್ಷನ್, ಕಾಮಿಡಿ, ಸೆಂಟಿಮೆಂಟ್ ಎಲ್ಲವೂ ಬೆರೆತಿರುವ ಪಕ್ಕಾ ಕಮರ್ಷಿಯಲ್ ಸಿನಿಮಾ ‘ಸೂರ್ಯ’. ಸಿನಿಮಾಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿರುವ ‘ಸೂರ್ಯ’ ಚಿತ್ರತಂಡ ಕೆಲವೇ ದಿನಗಳಲ್ಲಿ ಚಿತ್ರೀಕರಣ ಪ್ರಾರಂಭಿಸಲಿದೆ.
ಇದನ್ನೂ ಓದಿ.ಶೋ ಟಾಪರ್ ಆದ ರೂಪೇಶ್ ಶೆಟ್ಟಿ..
ಸೆಪ್ಟೆಂಬರ್ ಕೊನೆ ವಾರ ಈ ಚಿತ್ರದ ಮುಹೂರ್ತ ನೆರವೇರಲಿದ್ದು, ಅಕ್ಟೋಬರ್ ಮೊದಲ ವಾರದಿಂದ ಚಿತ್ರೀಕರಣ ಪ್ರಾರಂಭಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಪ್ರಶಾಂತ್ ಜತೆಗೆ ಶೃತಿ, `ಆರ್ಮುಗಂ’ ರವಿಶಂಕರ್, ಪ್ರಮೋದ್ ಶೆಟ್ಟಿ ಕಥೆ ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇನ್ನೂ ಸಾಕಷ್ಟು ಕಲಾವಿದರ ಆಯ್ಕೆ ಪ್ರಕ್ರಿಯೆಯಲ್ಲಿ ಸದ್ಯ ಚಿತ್ರತಂಡ ಬಿಜಿಯಾಗಿದೆ. ನಂದಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಬಸವರಾಜ್ ಬೆಣ್ಣಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ರವಿ ಬೆಣ್ಣಿ ಹಾಗೂ ಸಂತೋಷ್ ಕುರ್ಬೇಟ್ ಸಹ ನಿರ್ಮಾಪಕರಾಗಿ ಚಿತ್ರತಂಡದ ಜತೆಯಾಗಿದ್ದಾರೆ. ಕೆಜಿಎಫ್ ಚಿತ್ರದ ಛಾಯಾಗ್ರಾಹಕ ಭುವನ್ ಗೌಡ ಜೊತೆ ಕೆಲಸ ಮಾಡಿ ಸಾಕಷ್ಟು ಅನುಭವ ಪಡೆದುಕೊಂಡಿರುವ ಮನುರಾಜ್ ಈ ಚಿತ್ರದ ಛಾಯಾಗ್ರಾಹಕ. ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜಾ ಜೊತೆ ಕೆಲಸ ಮಾಡಿರುವ ಶ್ರೀಶಾಸ್ತ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಮಣಿಕಂಠ.ಕೆ.ವಿ ಸಂಭಾಷಣೆಯಲ್ಲಿ ‘ಸೂರ್ಯ’ ಮೂಡಿಬರಲಿದೆ.