ಬೆಂಗಳೂರು: ಹಳೇ ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ (ಎಚ್ಎಸ್ಆರ್ಪಿ) ಅಳವಡಿಕೆಗೆ ವಿಧಿಸಲಾಗಿದ್ದ ಗಡುವನ್ನು ಮೇ 31ರವರೆಗೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿರುವ ಬೆನ್ನಲ್ಲೇ, ನಕಲಿ ಕ್ಯೂಆರ್ ಕೋಡ್ ಲಿಂಕ್ಗಳನ್ನು ಆನ್ಲೈನ್ನಲ್ಲಿ ಕಳುಹಿಸಿ ವಾಹನ ಮಾಲೀಕರಿಗೆ ವಂಚಿಸಲು ಯತ್ನಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಾರ್ವಜನಿಕರಿಗೆ ಪೊಲೀಸರು ಸಲಹೆ ನೀಡಿದ್ದಾರೆ.
ರಕ್ಷಿತ್ ಪಾಂಡೆ ಎಂಬುವರು ತಮ್ಮ ಎಕ್ಸ್ ಖಾತೆ ಮೂಲಕ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ನಕಲಿ ಕ್ಯೂ ಆರ್ ಕೋಡ್ ಸಮೇತ ಪೊಲೀಸರಿಗೆ ವಿವರ ನೀಡಿದ್ದಾರೆ. ಗಡುವು ಸಮೀಪಿಸಿದ್ದರಿಂದ ಎಚ್ಎಸ್ಆರ್ಪಿ ಅಳವಡಿಕೆಗೆ ಜನರು ಮುಗಿಬಿದ್ದಿದ್ದರು. ಪರಿಣಾಮ ತಾಂತ್ರಿಕ ಸಮಸ್ಯೆಯಿಂದಾಗಿ ಶುಲ್ಕ ಪಾವತಿ ನಂತರದ ಪ್ರಕ್ರಿಯೆ ಕೈಕೊಡುತ್ತಿವೆ. ದಂಡದ ಎಚ್ಚರಿಕೆ ಕೊಟ್ಟ ಹಿನ್ನೆಲೆಯಲ್ಲಿ ಬುಕ್ಕಿಂಗ್ ಹೆಚ್ಚಾದ್ದರಿಂದ ಸರ್ವರ್ ಸಮಸ್ಯೆ ಕಾಣಿಸಿಕೊಂಡಿದೆ. ಮಾಲೀಕರು ಈ ಪೋರ್ಟಲ್ಗಳ ಮೂಲಕ ನೋಂದಣಿಗೆ ಪ್ರಯತ್ನಿಸಿದಾಗ ಹಲವರಿಗೆ ಕಂಪನಿ ಹೆಸರು, ವಾಹನದ ಮಾದರಿ ಇನ್ನಿತರ ವಿವರಗಳು ಹೊಂದಾಣಿಕೆಯಾಗುತ್ತಿಲ್ಲ. ಮತ್ತೆ ಕೆಲವರು ವಾಹನದ ನೋಂದಣಿ ಸಂಖ್ಯೆ, ಇಂಜಿನ್ ಸಂಖ್ಯೆ, ಚಾರ್ಸಿ ಸಂಖ್ಯೆಯ ವಿವರ ಹಾಕಿದರೆ ಅಂತಹ ವಾಹನವೇ ಇಲ್ಲವೆಂದು ಪೋರ್ಟಲ್ಗಳು ತೋರಿಸುತ್ತಿವೆ. ಹಲವು ವಾಹನಗಳ ಮಾಲೀಕರ ಮತ್ತು ಕಂಪನಿಯ ಹೆಸರು ಕೂಡ ಬದಲಾಗುತ್ತಿದೆಯಂತೆ. ಹೀಗಾಗಿ ಕೆಲವರು ನೋಂದಣಿಗೆ ಪರದಾಡುತ್ತಿದ್ದಾರೆ.
ಸಮಸ್ಯೆಯಾದರೆ ಠಾಣೆಗೆ ದೂರು ನೀಡಿ : ಎಚ್ಎಸ್ಆರ್ಪಿ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಫೇಕ್ ಲಿಂಕ್ಗಳು ಶೇರ್ ಆಗುತ್ತಿವೆ. ಜತೆಗೆ ನಕಲಿ ವೆಬ್ಸೈಟ್ಗಳ ಕಾರ್ಯ ನಿರ್ವಹಿಸುತ್ತಿವೆ. ಇದರ ಬಗ್ಗೆ ಸ್ವಲ್ಪ ಎಚ್ಚರದಿಂದಿರಿ. ಅಧಿಕೃತ ವೆಬ್ಸೈಟ್ ಮೂಲಕ ಮಾತ್ರ ನೀವು ಅಪ್ಲೈ ಮಾಡಿ. ಆರ್ಟಿಓ ಸೈಟ್ನಿಂದ ಜನರೇಟ್ ಆಗಿಲ್ಲದಿದ್ದರೆ ಯಾವುದೇ ಕಾರಣಕ್ಕೂ ಹಣ ಹಾಕಬೇಡಿ. ಒಮ್ಮೆ ವೆಬ್ಸೈಟ್ ಸರಿಯಾಗಿದೆಯೇ ಎಂದು ನೋಡಿಕೊಂಡು ನಂತರ ಹಣ ಪಾವತಿಸಿ. ವಂಚನೆಗೆ ಒಳಗಾದಲ್ಲಿ ಕೂಡಲೇ ಸೈಬರ್ ಕ್ರೖೆಂ ಠಾಣೆಗೆ ದೂರು ನೀಡಿ ಎಂದು ದಕ್ಷಿಣ ವಿಭಾಗದ ಸಂಚಾರ ಡಿಸಿಪಿ ಶಿವಪ್ರಕಾಶ್ ದೇವರಾಜ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಅಧಿಕೃತ ವೆಬ್ಸೈಟ್ನಿಂದ ಮಾತ್ರ ಎಚ್ಎಸ್ಆರ್ಪಿಗೆ ನೋಂದಣಿ ಮಾಡಿಕೊಳ್ಳಿ ಅದು ಬ್ರೌಸರ್ ಮೇಲೆ ಲಾಕ್ ಸಿಂಬಲ್ ಹೊಂದಿರುತ್ತದೆ ಲಾಕ್ ಸಿಂಬಲ್ ಇಲ್ಲವಾದರೆ ಅದು ಸುರಕ್ಷಿತವಲ್ಲದ ವೆಬ್ಸೈಟ್ ಆಗಿರುತ್ತದೆ. ಹೀಗಾಗಿ ಜನರು ಬಹಳ ಎಚ್ಚರವಹಿಸಬೇಕು. ಇಲ್ಲವಾದರೆ ಸೈಬರ್ ಖದೀಮರು ನಿಮಗೆ ವಂಚಿಸುತ್ತಾರೆ. ಈ ಬಗ್ಗೆ ಪೊಲೀಸರು ಜಾಗೃತಿ ಮೂಡಿಸುವಂತಹ ಕೆಲಸ ಮಾಡುತ್ತಿದ್ದಾರೆ.
| ಶಿವಪ್ರಕಾಶ್ ದೇವರಾಜ್ ಬೆಂ.ದಕ್ಷಿಣ ವಿಭಾಗದ ಸಂಚಾರ ಡಿಸಿಪಿ
Transport.karnataka.gov.in ಅಥವಾ www.siam.in ಭೇಟಿ ಕೊಟ್ಟು ಬುಕ್ ಎಚ್ಎಸ್ಆರ್ಪಿ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ ವಾಹನದ ಮೂಲ ವಿವರಗಳನ್ನು ಭರ್ತಿ ಮಾಡಬೇಕು. ನಂಬರ್ ಪ್ಲೇಟ್ ಅಳವಡಿಕೆಗೆ ಸ್ಥಳ ಆಯ್ಕೆ ಮಾಡಿಕೊಂಡರೆ ಅವರೇ ಬಂದು ಫಿಟ್ ಮಾಡುತ್ತಾರೆ.
ಅಕ್ಬರ್-ಸೀತಾ ಲಿವಿಂಗ್ ಟುಗೆದರ್: ಕೋರ್ಟ್ ಮೆಟ್ಟಿಲೇರಿದ ವಿಶ್ವ ಹಿಂದೂ ಪರಿಷತ್! ನ್ಯಾಯಾಲಯ ಹೇಳಿದ್ದೇನು?