ಮುದಗಲ್: ಪಟ್ಟಣದಲ್ಲಿ ಗುಡ್ ಫ್ರೈಡೇ ನಿಮಿತ್ತ ಶುಕ್ರವಾರ ಚರ್ಚ್ ನಿಂದ ಕಾಡ ಚಿನ್ನಪ್ಪನವರ ಗುಡ್ಡದವರೆಗೆ ಶಿಲುಬೆ ಮೆರವಣಿಗೆ ಅದ್ದೂರಿಯಾಗಿ ಜರುಗಿತು.
ಇದನ್ನೂ ಓದಿ: ಕರಾವಳಿಯ ಚರ್ಚ್ಗಳಲ್ಲಿ ಪ್ರಾರ್ಥನೆ, ಶಿಲುಬೆಯ ಹಾದಿ
ಸಮೀಪದ ಕೆ.ಮಾರಿಯಮ್ಮ ಹಳ್ಳಿಯಲ್ಲಿ ಗುಡ್ ಫ್ರೈಡೇ ನಿಮಿತ್ತ ಜೆಎಂಜೆ ಆಂಗ್ಲ ಮಾಧ್ಯಮ ಶಾಲೆಯಿಂದ ಆರೋಗ್ಯ ಮಾತೆ ದೇವಾಲಯದವರಗೆ ಯೇಸುವಿನ ಪವಾಡಗಳನ್ನು ನಾಟಕ ರೂಪಕ ಪ್ರದರ್ಶಿಸುತ್ತಾ, ಯೇಸುವಿನ ಶ್ಲೋಕವನ್ನು ಧ್ಯಾನಿಸಿದರು. ಚರ್ಚ್ ಫಾದರ್ಗಳಾದ ದಾನಪ್ಪ, ಸುನೀಲ್, ಪನ್ನೀಸ್ವಾಮಿ, ಆಲ್ಬರ್ಟ್ ಡಿಸಿಲ್ವಾ ಇದ್ದರು.