More

    ಜೆಎನ್​ಯು ಹಿಂಸಾಚಾರ ಪ್ರಕರಣವನ್ನು ಅಪರಾಧ ವಿಭಾಗಕ್ಕೆ ವರ್ಗಾಯಿಸಿದ ದೆಹಲಿ ಪೊಲೀಸರು; ತನಿಖೆ ಪ್ರಾರಂಭ

    ನವದೆಹಲಿ: ಜೆಎನ್​ಯು ವಿಶ್ವವಿದ್ಯಾಲಯದಲ್ಲಿ ಭಾನುವಾರ ನಡೆದ ಹಿಂಸಾಚಾರ ಪ್ರಕರಣವನ್ನು ದೆಹಲಿ ಪೊಲೀಸರು ಸೋಮವಾರ ಅಪರಾಧ ವಿಭಾಗಕ್ಕೆ ವರ್ಗಾಯಿಸಿದ್ದಾರೆ. ಕ್ರೈ ಬ್ರ್ಯಾಂಚ್​ ಪೊಲೀಸರ ಎರಡು ತಂಡ ಪ್ರಕರಣದ ತನಿಖೆ ನಡೆಸಲಿದೆ.

    ಈಗಾಗಲೇ ವಿವಿಯ ಉಪಕುಲಪತಿ ಮತ್ತು ರಿಜಿಸ್ಟ್ರಾರ್​ ಅವರು ದೆಹಲಿ ಲೆಫ್ಟಿನೆಂಟ್​ ಗವರ್ನರ್​ ಅನಿಲ್​ ಬೈಜಾಲ್ ಅವರನ್ನು ಭೇಟಿಯಾಗಿ ಜೆಎನ್​ಯುವಿನಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ವಿವರಿಸಿದ್ದಾರೆ ಎನ್ನಲಾಗಿದೆ.

    ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಪರಾಧ ವಿಭಾಗದ ಪೊಲೀಸ್​ ಅಧಿಕಾರಿಗಳು ಈಗಾಗಲೇ ಕೆಲವು ಸಾಕ್ಷಿಗಳನ್ನು ಸಂಗ್ರಹಿಸಲು ಪ್ರಾರಂಭಿಸಿದ್ದು, ವಿದ್ಯಾರ್ಥಿಗಳೊಂದಿಗೆ ಕೂಡ ಮಾತುಕತೆ ನಡೆಸುತ್ತಿದ್ದಾರೆ.  

    ನೈಋತ್ಯ ಪೊಲೀಸ್ ಉಪ ಆಯುಕ್ತ ದೇವೇಂದ್ರ ಆರ್ಯ ಹಾಗೂ ಜಂಟಿ ಪೊಲೀಸ್​ ಆಯುಕ್ತ ಆನಂದ್​ ಮೋಹನ್​ ಅವರು ವಿವಿ ಕ್ಯಾಂಪಸ್​ಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲನೆ ಮಾಡಿದ್ದಾರೆ.  (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts