ಅಹಮದಾಬಾದ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಸೀಮಿತ ಓವರ್ ಸರಣಿಗೆ ಪೂರ್ವಭಾವಿಯಾಗಿ ನಡೆಸಲಾದ ಆರ್ಟಿ-ಪಿಸಿಆರ್ ಪರೀಕ್ಷೆಯಲ್ಲಿ ಟೀಮ್ ಇಂಡಿಯಾದ ಆಟಗಾರರು ಮತ್ತು ತರಬೇತಿ ಸಿಬ್ಬಂದಿ ಒಳಗೊಂಡಂತೆ ಒಟ್ಟು 8 ಸದಸ್ಯರಿಗೆ ಕರೊನಾ ಸೋಂಕು ದೃಢಪಟ್ಟಿದೆ ಎಂದು ವರದಿಯಾಗಿದೆ.
ಏಕದಿನ ಸರಣಿಗಾಗಿ ಭಾರತ ತಂಡದ ಆಟಗಾರರು ಭಾನುವಾರ ಅಹಮದಾಬಾದ್ನಲ್ಲಿ ಒಗ್ಗೂಡಿದ್ದರು ಮತ್ತು 3 ದಿನಗಳ ಕ್ವಾರಂಟೈನ್ಗೆ ಒಳಪಟ್ಟಿದ್ದರು. ಈ ವೇಳೆ ನಡೆಸಲಾದ ಪರೀಕ್ಷೆಯಲ್ಲಿ ಪಾಸಿಟಿವ್ ವರದಿಗಳು ಬಂದಿವೆ ಎನ್ನಲಾಗಿದೆ.
ವರದಿಗಳ ಪ್ರಕಾರ, ಶಿಖರ್ ಧವನ್, ಋತುರಾಜ್ ಗಾಯಕ್ವಾಡ್ ಮತ್ತು ಶ್ರೇಯಸ್ ಅಯ್ಯರ್ ಸೋಂಕಿತರಾಗಿರುವ ಆಟಗಾರರಾಗಿದ್ದಾರೆ. ಈ ಮೂವರು ಏಕದಿನ ಸರಣಿಗೆ ಅಲಭ್ಯರಾಗಲಿದ್ದಾರೆ. ಇದೀಗ ತಂಡದ ಎಲ್ಲ ಸದಸ್ಯರನ್ನೂ ಐಸೋಲೇಷನ್ನಲ್ಲಿಡಲಾಗಿದೆ ಎನ್ನಲಾಗಿದೆ.
ಶ್ರೇಯಸ್ ಅಯ್ಯರ್ಗಾಗಿ ಆರ್ಸಿಬಿ ಸಲ್ಲಿಸಲಿರುವ ಬಿಡ್ ಮೊತ್ತವೆಷ್ಟು ಗೊತ್ತೇ?