ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ನವರಾತ್ರಿ ಉತ್ಸವ ನಾಡಹಬ್ಬದಂತೆ ಆಚರಿಸಲ್ಪಡುತ್ತದೆ. ಅಲ್ಲಿ ಗುರುವಾರದಿಂದ ದುರ್ಗಾ ಪೂಜೆ ಆರಂಭವಾಗುತ್ತಿದ್ದು, ದುರ್ಗಾ ಪೂಜೆಯ ಪೆಂಡಾಲ್ ಕಾರ್ಯಕ್ರಮದಲ್ಲಿ ಗರಿಷ್ಠ 45 ಜನರಿಗಷ್ಟೇ ಪ್ರವೇಶಾವಕಾಶ ನೀಡಬಹುದು ಎಂದು ಕಲ್ಕತಾ ಹೈಕೋರ್ಟ್ ಬುಧವಾರ ಆದೇಶಿಸಿದೆ.
ಪೆಂಡಾಲ್ನ ಗಾತ್ರಕ್ಕನುಸಾರವಾಗಿ ಒಂದೇ ಸಮಯದಲ್ಲಿ ಒಳಪ್ರವೇಶಿಸುವವರ ಸಂಖ್ಯೆಯಲ್ಲಿ ವ್ಯತ್ಯವಾಗಲಿದೆ. ಸಾಮಾನ್ಯ ಪೆಂಡಾಲ್ ಆದರೆ 45 ಜನರು ಪ್ರವೇಶಿಸಬಹುದು. ಸಣ್ಣ ಪೆಂಡಾಲ್ ಆಗಿದ್ದರೆ 15 ಮಂದಿಗೆಷ್ಟೆ ಅವಕಾಶ. ಪ್ರತಿ ದಿನ ಪೆಂಡಾಲ್ ಒಳಗೆ ಪ್ರವೇಶಿಸುವ ಆಯೋಜಕರ ಹೆಸರನ್ನು ಪಟ್ಟಿ ಮಾಡಿ ಬೆಳಗ್ಗೆ 8 ಗಂಟೆಗೆ ಪೆಂಡಾಲ್ ಹೊರಗೆ ಹಾಕಬೇಕು ಎಂದು ನ್ಯಾಯಾಲಯ ತಿಳಿಸಿದೆ. ವಾದ್ಯಮೇಳಗಳಿಗೆ ‘ನೋ ಎಂಟ್ರಿ ಝೋನ್’ನಲ್ಲಿ ಇರಲು ಹೈಕೋರ್ಟ್ ಪೀಠ ಅವಕಾಶ ನೀಡಿದೆ.
ಇದನ್ನೂ ಓದಿ: ಶಿಕ್ಷಣ ವ್ಯಾಪಾರವೇ- ಶಿಕ್ಷಣ ಸಂಸ್ಥೆಗಳು ವ್ಯಾಪಾರಿ ಸಂಸ್ಥೆಗಳೇ?: ಪರಿಶೀಲಿಸಲಿದೆ ಸುಪ್ರೀಂ ಕೋರ್ಟ್
ಸಾರ್ವಜನಿಕರಿಗೆ ಪೆಂಡಾಲ್ ಒಳಗೆ ಪ್ರವೇಶಕ್ಕೆ ಅನುಮತಿ ಇಲ್ಲವೆಂದು ತಿಳಿಸಲಾಗಿದೆ. ದುರ್ಗಾ ಪೂಜೆಯ ಪೆಂಡಾಲ್ಗಳನ್ನು ‘ನೋ ಎಂಟ್ರಿ ಝೋನ್’ ಎಂದು ಕರೆದಿದ್ದ ನ್ಯಾಯಾಲಯ ಕೇವಲ 25 ಆಯೋಜಕರ ಪ್ರವೇಶಕ್ಕೆ ಅನುಮತಿ ನೀಡುವುದಾಗಿ ಈ ಹಿಂದೆ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಪ್ರಮುಖ 400 ಆಯೋಜಕರ ತಂಡವು ಅರ್ಜಿ ಸಲ್ಲಿಸಿತ್ತು. (ಏಜೆನ್ಸೀಸ್)
ಪ್ರತಿಸ್ಪರ್ಧಿಗಳನ್ನು ದುರ್ಬಲಗೊಳಿಸುವುದಕ್ಕಾಗಿ ಕಾನೂನು ಬಾಹಿರ ಕಾರ್ಯಾಚರಣೆ ಆರೋಪ: ಗೂಗಲ್ ವಿರುದ್ಧ ದಾವೆ