More

    ಐವತ್ತಕ್ಕೂ ಅಧಿಕ ಜನರಿಂದ ಚೀಟಿ ಕಟ್ಟಿಸಿಕೊಂಡು ಪರಾರಿಯಾದ ದಂಪತಿ; ಕೋಟಿಗಟ್ಟಲೆ ರೂ. ವಂಚನೆ, ಪೊಲೀಸರಿಗೆ ದೂರು

    ಆನೇಕಲ್: ಐವತ್ತಕ್ಕೂ ಅಧಿಕ ಜನರಿಂದ ಚೀಟಿ ಕಟ್ಟಿಸಿಕೊಂಡು, ಕೋಟಿಗಟ್ಟಲೆ ರೂ. ವಂಚನೆ ಮಾಡಿರುವ ಆರೋಪ ದಂಪತಿ ವಿರುದ್ಧ ಕೇಳಿ ಬಂದಿದ್ದು, ಪರಾರಿಯಾಗಿರು ಗಂಡ-ಹೆಂಡತಿ ವಿರುದ್ಧ ಪೊಲೀಸರಿಗೆ ದೂರು ಕೂಡ ಕೊಡಲಾಗಿದೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಬನ್ನೇರುಘಟ್ಟದಲ್ಲಿ ಈ ವಂಚನೆ ಪ್ರಕರಣ ನಡೆದಿದೆ. ಚೀಟಿ ವ್ಯವಹಾರ ನಡೆಸುತ್ತಿದ್ದ ಬನ್ನೇರುಘಟ್ಟ ನಿವಾಸಿ ಪೌಲಿನಾ ಹಾಗೂ ಮಂಜುನಾಥ್ ಪರಾರಿಯಾಗಿರುವ ದಂಪತಿ. ಇವರಿಬ್ಬರ ವಿರುದ್ಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಬಹುತೇಕ ಬಡವರಿಂದಲೇ ಚೀಟಿ ಹಾಕಿಸಿಕೊಂಡಿದ್ದ ಈ ದಂಪತಿ ಇದೀಗ ಪರಾರಿಯಾಗಿದ್ದು, ಸಂತ್ರಸ್ತ ಚೀಟಿದಾರರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಹೂ ಮಾರುವವರು, ಅಂಗವಿಕಲರು, ಮನೆಗೆಲಸದವರು ಮುಂತಾದ 50ಕ್ಕೂ ಅಧಿಕ ಮಂದಿ ಇವರ ಬಳಿ ಚೀಟಿ ಹಾಕಿದ್ದು, ಈ ದಂಪತಿ ಸುಮಾರು 1 ಕೋಟಿ ರೂಪಾಯಿಗೂ ಅಧಿಕ ವಂಚನೆ ಮಾಡಿದ್ದಾರೆ ಎನ್ನಲಾಗಿದೆ.

    ಐವತ್ತಕ್ಕೂ ಅಧಿಕ ಜನರಿಂದ ಚೀಟಿ ಕಟ್ಟಿಸಿಕೊಂಡು ಪರಾರಿಯಾದ ದಂಪತಿ; ಕೋಟಿಗಟ್ಟಲೆ ರೂ. ವಂಚನೆ, ಪೊಲೀಸರಿಗೆ ದೂರು

    ಚೀಟಿ ಹಣ ಕೇಳಿದರೆ ಧಮಕಿ ಹಾಕುತ್ತಿದ್ದ ದಂಪತಿ ಪರಾರಿಯಾಗಿದ್ದು, ಸಂತ್ರಸ್ತರು ಅವರ ಮನೆಗೆ ಬೀಗ ಜಡಿದು, ಮಂಜುನಾಥ್ ತಂದೆ-ತಾಯಿಯ ಮನೆಯ ಮುಂದೆ ಕಾದುಕುಳಿತ ಪ್ರಸಂಗ ನಡೆದಿದೆ. ಆದರೆ ನಮಗೂ ಪುತ್ರನಿಗೂ ಯಾವುದೇ ಸಂಬಂಧವಿಲ್ಲ ಎಂದು ಪಾಲಕರು ಉತ್ತರಿಸಿದ್ದಾರೆ ಎನ್ನಲಾಗಿದೆ. ಮಂಜುನಾಥ್ ವಿರುದ್ಧ ಇನ್ನೂ ಹಲವು ವಂಚನೆ ಪ್ರಕರಣಗಳು ದಾಖಲಾಗಿರುವ ಆರೋಪವೂ ಇದೆ.

    ಶಾಸಕರ ಸ್ಟಿಕ್ಕರ್​​ ಇರುವ ಕಾರಿಗೆ ದ್ವಿಚಕ್ರ ವಾಹನ ಸವಾರ ಬಲಿ; ತಲೆ ಮೇಲೇ ಹರಿದು ಹೋದ ಕಾರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts