ಹಾವೇರಿ: ಕರೊನಾ ವೈರಸ್ ತಡೆಗಟ್ಟಲು ಹೇರಲಾಗಿದ್ದ ಲಾಕ್ಡೌನ್ ಸಮಯದಲ್ಲಿ ಅಂಗಡಿ ಬಾಗಿಲು ತೆರೆಯದಿದ್ದರೂ ಸಹ ಹಿಂದಿಗಿಂತ ಹೆಚ್ಚಿನ ಕರೆಂಟ್ ಬಿಲ್ ನೋಡಿ ಅಂಗಡಿ ಮಾಲೀಕನೊಬ್ಬ ಬೆಸ್ತು ಬಿದ್ದಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.
ಇದನ್ನೂ ಓದಿ:ಪತ್ನಿಗೆ ಹಾವು ಕಚ್ಚಿಸಿ ಕೊಲೆಗೈದ ಪ್ರಕರಣ: ಆರೋಪಿ ಸಿಕ್ಕಿಬೀಳಲು ಆತನ ನಡೆಯೇ ಕಾರಣವಾಯ್ತು!
ರಾಣೆಬೆನ್ನೂರು ಪಟ್ಟಣದ ತಾಯಿ ಝೆರಾಕ್ಸ್ ಅಂಗಡಿ ಮಾಲೀಕ ಪಕ್ಕೀರೆಶ್, ಹುಬ್ಬಳ್ಳಿ ವಿದ್ಯುತ್ ನಿಗಮ (ಹೆಸ್ಕಾಂ) ಮಾಡಿದ ಎಡವಟ್ಟಿಗೆ ಕಂಗಾಲಾಗಿದ್ದಾರೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಬರೋಬ್ಬರಿ ಒಂದು ತಿಂಗಳಿಗೂ ಅಧಿಕ ಕಾಲ ಇಡೀ ದೇಶವೇ ಸ್ತಬ್ಧವಾಗಿರುವುದು ಎಲ್ಲರಿಗೂ ತಿಳಿದಿದೆ. ಝೆರಾಕ್ಸ್ ಅಂಗಡಿಯ ಸಹ ಇದಕ್ಕೆ ಹೊರತಾಗಿಲ್ಲ. ಆದರೂ ಅದ್ಹೇಗೆ ಹೆಚ್ಚಿನ ಕರೆಂಟ್ ಬಿಲ್ ಬಂತು ಎಂಬುದು ಪಕ್ಕೀರೇಶ್ ಅವರ ಪ್ರಶ್ನೆಯಾಗಿದೆ.
ಇದನ್ನೂ ಓದಿ: ಇನ್ಸ್ಟಾಗ್ರಾಂನಲ್ಲಿ ಕೊನೆಯ ಸಂದೇಶ ಬರೆದು ಆತ್ಮಹತ್ಯೆಗೆ ಶರಣಾದ ಬಾಲಿವುಡ್ ಯುವನಟಿ
ಅಂದಹಾಗೆ ಬರೋಬ್ಬರಿ 5433 ರೂ. ಬಿಲ್ ಅನ್ನು ಹೆಸ್ಕಾಂ ನೀಡಿದೆ. ಈ ಮೊದಲು ಪ್ರತಿ ತಿಂಗಳು 600 ರೂ.ಗು ಅಧಿಕ ಬಿಲ್ ಮಾತ್ರ ಬತುತ್ತಿತ್ತು. ಇದೀಗ ನಾಲ್ಕೈದು ತಿಂಗಳಿನ ಬಿಲ್ ಒಂದೇ ಬಾರಿಗೆ ಹೆಸ್ಕಾಂ ನೀಡಿದೆ ಎಂದು ಪಕ್ಕೀರೆಶ್ ಆರೋಪಿಸಿದ್ದು, ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್)