More

    ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಕರೊನಾ ಭೀತಿ: ಐವರಿಗೆ ಸೋಂಕು ದೃಢ, ಸಚಿವ ಶ್ರೀರಾಮುಲು ಟ್ವೀಟ್​

    ಬೆಂಗಳೂರು: ಕಿಲ್ಲರ್​ ಕರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಮತ್ತೆ ಐದು ಹೊಸ ಪ್ರಕರಣಗಳು ಪತ್ತೆಯಾಗಿವೆ.

    ಈ ಬಗ್ಗೆ ಟ್ವೀಟ್​ ಮಾಡಿರುವ ಆರೋಗ್ಯ ಸಚಿವ ಶ್ರೀರಾಮುಲು, ದಿನಾಂಕ 29/03/20ರ ಸಂಜೆ 5 ಗಂಟೆಯಿಂದ 30/03/20ರ ಬೆಳಗ್ಗೆ 8 ಗಂಟೆಯವರೆಗೆ 5 ಹೊಸ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 88ಕ್ಕೇರಿದೆ. ಪತ್ತೆಯಾದ 5 ಪ್ರಕರಣಗಳು ಮೈಸೂರು ಜಿಲ್ಲೆ ನಂಜನಗೂಡು ನಿವಾಸಿಗಳಾಗಿದ್ದಾರೆ ಎಂದು ತಿಳಿಸಿದ್ದಾರೆ.

    ನಂಜನಗೂಡು ಶಾಸಕ ಹರ್ಷವರ್ಧನ್ ಮಾತನಾಡಿ, ನಂಜನಗೂಡಿನಲ್ಲಿ 4500 ಜನರಿಗೆ ಆರೋಗ್ಯ ತಪಾಸಣೆ ಮಾಡಲಾಗಿದೆ. ಸೋಂಕಿತರ ಕುಟುಂಬಸ್ಥರನ್ನು ಕ್ವಾರಂಟೈನ್​ನಲ್ಲಿ ಇಡಲಾಗಿದೆ. ಜುಬಿಲಿಯೆಂಟ್ ಜನರಿಕ್ ಕಾರ್ಖಾನೆಯ ಕೆಲ ಕಾರ್ಮಿಕರಲ್ಲೂ ಕರೊನಾ ಪಾಸಿಟಿವ್ ಆಗಿದೆ. 14 ಕುಟುಂಬಗಳನ್ನು ಪ್ರಾಥಮಿಕ ಸಂಪರ್ಕ ಎಂದು ಪರಿಗಣಿಸಿ, ಎಲ್ಲರನ್ನೂ ಈಗಾಗಲೇ ಪ್ರತ್ಯೇಕವಾಗಿ ಇಡಲಾಗಿದೆ ಎಂದು ತಿಳಿಸಿದ್ದಾರೆ.

    VIDEO| ಮಹಾಮಾರಿ ಕರೊನಾ ವಿರುದ್ಧ ಹೋರಾಡಲು ಸ್ಯಾನಿಟೈಸರ್​ ಸುರಂಗ ನಿರ್ಮಾಣ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts