ಬೆಂಗಳೂರು: ಮಾರಕ ಕೊರೊನಾ ವೈರಸ್ ಸೋಂಕು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಹಿವಾಟಿಗೆ ದೊಡ್ಡ ಪೆಟ್ಟು ನೀಡಿದೆ.
ಬೆಂಗಳೂರು ನಗರದಲ್ಲಿ ಕೊರೊನಾ ವೈರಸ್ ಸೋಂಕು ಹೊಂದಿರುವ ವ್ಯಕ್ತಿ ಪತ್ತೆಯಾದ ನಂತರ ರಾಜ್ಯದ ವಿವಿಧ ಕಡೆಗಳಲ್ಲಿ ಬೆಂಗಳೂರಿಗೆ ಆಗಮಿಸುವ ಪ್ರಯಾಣಿಕರ ಸಂಖ್ಯೆ ಶೇ.50 ಕುಸಿದಿದೆ. ಬೆಂಗಳೂರಿಗೆ ತೆರಳಿದರೆ ವೈರಸ್ ಸೋಂಕು ಹರಡಬಹುದು ಎಂದು ಪ್ರಯಾಣಿಕರು ಪ್ರಯಾಣವನ್ನು ಮುಂದೂಡುತ್ತಿದ್ದಾರೆ. ಇದರಿಂದ ಬಸ್ಗಳು ಖಾಲಿಯಾಗಿ ಸಂಚರಿಸುತ್ತಿವೆ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಬುಕ್ಕಿಂಗ್ ಕೂಡ ಕುಸಿತ: ವೋಲ್ವೋ ಹಾಗೂ ರಾಜಹಂಸ ಬಸ್ಗಳ ಟಿಕೆಟ್ ಬುಕಿಂಗ್ ಕೂಡ ಕುಸಿದಿದೆ. ವಿವಿಧ ಜಿಲ್ಲಾ ಕೇಂದ್ರಗಳಿಂದ ಪ್ರತಿನಿತ್ಯ ಅಂದಾಜು 15 ಸೀಟುಗಳು ಬುಕ್ಕಿಂಗ್ ಆಗುತ್ತಿದ್ದರೇ ಈಗ ಕೇವಲ 4ರಿಂದ 5 ಸೀಟುಗಳು ಮಾತ್ರ ಬುಕ್ಕಿಂಗ್ ಆಗತ್ತಿವೆ. ಅಡ್ವಾನ್ಸ್ ಬುಕ್ಕಿಂಗ್ ಕೂಡ ಆಗುತ್ತಿಲ್ಲ. (ದಿಗ್ವಿಜಯ ನ್ಯೂಸ್)
ಮಾಸ್ಕ್ ಕಾಮಣ್ಣನಿಗೆ ಹೋಳಿ ಪೂಜೆ; ದಹನವಾಗುತ್ತಿದ್ದಾಗಲೂ ಬಾಯಿ, ಮೂಗು ಮುಚ್ಚಿಕೊಂಡೇ ಇದ್ದ…!