ದಾವಣಗೆರೆ: ಮಹಾಮಾರಿ ಕರೊನಾ ವ್ಯಾಪ್ತಿ ದಿನೇದಿನೆ ವಿಸ್ತರಿಸುತ್ತಲೇ ಇದೆ. ಇದರ ಬೆನ್ನಲ್ಲೇ ಹೊಸ ರೂಪಾಂತರ ಕರೊನಾ ಸೋಂಕಿನ ಭೀತಿಯೂ ಆವರಿಸಿದ್ದು, ಬಿಟ್ರನ್ ಕರೊನಾ ನಿಯಂತ್ರಿಸಲು ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಇಂದಿನಿಂದ ಜಾರಿಯಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಒಂದೇ ಕಾಲೇಜಿನ 21 ವಿದ್ಯಾರ್ಥಿನಿಯರಿಗೆ ಕೋವಿಡ್ ಪಾಸಿಟಿವ್ ಬಂದಿದೆ.
ದಾವಣಗೆರೆಯ ನರ್ಸಿಂಗ್ ಕಾಲೇಜಿನ 21 ವಿದ್ಯಾರ್ಥಿನಿಯರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಚಿಗೆಟೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿರಿ ನೈಟ್ ಕರ್ಫ್ಯೂ ದಿನಾಂಕ-ಸಮಯದಲ್ಲಿ ಬದಲಾವಣೆ: ಸಿಎಂ ಯಡಿಯೂರಪ್ಪ
ಸಹಜವಾಗಿ ಎಲ್ಲ ಕಾಲೇಜಿನಂತೆ ಇಲ್ಲಿಯೂ ವಿದ್ಯಾರ್ಥಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಮೂರು ದಿನಗಳಿಂದ ಸ್ವ್ಯಾಬ್ ಸಂಗ್ರಹಿಸಲಾಗಿತ್ತು. ಆ ಪೈಕಿ 21 ವಿದ್ಯಾರ್ಥಿನಿಯರ ವರದಿ ಪಾಸಿಟಿವ್ ಬಂದಿದೆ. ಈ ವಿದ್ಯಾರ್ಥಿಗಳು ಕೇರಳಾದಿಂದ ಬಂದಿದ್ದರು.
ಚಿಕಿತ್ಸೆ ನೀಡಲಾಗುತ್ತಿದ್ದು. ಎಲ್ಲರೂ ಸ್ಪಂದಿಸುತ್ತಿದ್ದಾರೆ. ಆತಂಕ ಪಡುವ ಅಗತ್ಯವಿಲ್ಲ. ಇದ್ಯಾವುದೂ ಇಂಗ್ಲೆಂಡ್ ಕರೊನಾ ಅಲ್ಲ ಎಂದು ‘ದಿಗ್ವಿಜಯ ನ್ಯೂಸ್’ಗೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಮಾಹಿತಿ ನೀಡಿದ್ದಾರೆ.
ರಾಜ್ಯ ಸಚಿವ ಸಂಪುಟದಲ್ಲಿ ಸಂಕ್ರಾಂತಿಗೆ ಮಹತ್ತರ ಬದಲಾವಣೆ, ಇಬ್ಬರು ಸಚಿವರಿಗೆ ಕೊಕ್!
‘ಎಣ್ಣೆ’ ಮತ್ತಲ್ಲಿ ಬಂದ ಅಣ್ಣನಿಗೆ ಬಿಯರ್ ಬಾಟಲಿಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ ತಂಗಿ!