More

    ಕರೊನಾ ಗೆದ್ದ ದಾಸನದೊಡ್ಡಿ ಕಾಮೇಗೌಡಗೆ ಪುಷ್ಪವೃಷ್ಟಿ

    ಮಂಡ್ಯ: ಕರೊನಾ ಸೋಂಕಿಗೆ ಒಳಗಾಗಿದ್ದ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಕಾಮೇಗೌಡ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾದರು.

    ಸೋಂಕಿನಿಂದ ಚೇತರಿಸಿಕೊಂಡ ಹಿನ್ನೆಲೆಯಲ್ಲಿ ನಗರದ ಮಿಮ್ಸ್​ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತದಿಂದ ಅವರಿಗೆ ಪುಷ್ಪವೃಷ್ಟಿ ಮಾಡಿ, ಗುಲಾಬಿ ಹೂ ನೀಡಿ ಅಭಿನಂದಿಸಲಾಯಿತು.

    ಇದನ್ನೂ ಓದಿರಿ ಕೋವಿಡ್ ವಾರ್ಡ್​ನಿಂದಲೇ ಜನರಿಗೆ ಕೈಮುಗಿದು ಮನವಿ ಮಾಡಿದ ದಾಸನದೊಡ್ಡಿ ಕಾಮೇಗೌಡ.. ಅದ್ಹೇನು?

    ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕಾಮೇಗೌಡ, ಆಸ್ಪತ್ರೆಯಲ್ಲಿ ವೈದ್ಯರು ನನ್ನನ್ನು ಬಹಳ ಚೆನ್ನಾಗಿ ನೋಡಿಕೊಂಡರು. ಇಲ್ಲದಿದ್ದರೆ ನಾನು ಇಷ್ಟೊತ್ತಿಗೆ ಏನಾಗುತ್ತಿದ್ದೆ ಎಂಬುದು ಗೊತ್ತಿರಲಿಲ್ಲ ಎಂದರು.

    ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್​, ಮಿಮ್ಸ್​ ನಿರ್ದೇಶಕ ಡಾ.ಜಿ.ಎಂ.ಪ್ರಕಾಶ್​, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್​.ಪಿ. ಮಂಚೇಗೌಡ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಟಿ.ಎನ್​.ಧನಂಜಯ ಇತರರಿದ್ದರು. ಕಾಮೇಗೌಡ ಅವರನ್ನು ಆರೋಗ್ಯ ಇಲಾಖೆಯ ವಿಶೇಷ ವಾಹನದಲ್ಲಿ ಅವರ ಸ್ವಗ್ರಾಮ ದಾಸನದೊಡ್ಡಿಗೆ ಕಳುಹಿಸಿಕೊಡಲಾಯಿತು.

    ವಿಚಾರಣೆ ವೇಳೆ ಮತ್ತೊಂದು ಭಯಾನಕ ಸುಳ್ಳು ಹೇಳಿದ ಡ್ರೋನ್ ಪ್ರತಾಪ್​, ವೈದ್ಯರ ವಿರುದ್ಧವೇ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts