More

    ಸಹಕಾರಿ ಸಂಘಗಳ ಪಾತ್ರ ಪ್ರಮುಖ

    ಚಿಕ್ಕೋಡಿ ಗ್ರಾಮೀಣ: ಸಹಕಾರಿ ಸಂಘಗಳು ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಶ್ರೀ ಕರ್ಲಹೊಂಡಲಿಂಗೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿ ಜನರ ವಿಶ್ವಾಸ ಗಳಿಸಿದೆ ಎಂದು ನಿಡಸೋಸಿ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.

    ಪಟ್ಟಣದ ಶ್ರೀ ಕರ್ಲಹೊಂಡಲಿಂಗೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿ ನೂತನ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿ, ಗ್ರಾಮೀಣ ಜನರ ಜೀವನಮಟ್ಟ ಸುಧಾರಣೆಗೆ ಸಹಕಾರಿ ಸಂಘಗಳ ಪಾತ್ರ ಪ್ರಮುಖವಾಗಿದೆ.

    ಸೊಸೈಟಿ ಅಧ್ಯಕ್ಷ ಮಾರುತಿ ಪೂಜಾರಿ ಮಾತನಾಡಿ, ಜನರ ಏಳಿಗೆಗಾಗಿ ಸಹಕಾರ ಸಂಘ ಸ್ಥಾಪಿಸಲಾಗಿದೆ ಎಂದರು. ಸಂಘದ ಉಪಾಧ್ಯಕ್ಷ ಅಮ್ಮನ್ನ ಬಿಳಗೆ, ಕಾರ್ಯದರ್ಶಿ ಸುರೇಶ ಕುಂಬಾರ, ಗಣ್ಯರಾದ ರಾಜೇಂದ್ರ ಕರಾಳೆ, ಅಪ್ಪಾಸಾಬ್ ಜೊಲ್ಲೆ, ಜಯಾನಂದ ಜಾಧವ, ಕಲ್ಲಪ್ಪ ಜಾಧವ, ಎ.ಎ.ಇಂಗಳೆ, ದಿಲ್ೀ ದೇಸಾಯಿ, ರಾಜು ಬಾಗೇವಾಡಿ, ಚಿದಾನಂದ ಬೆಳ್ಳಿ, ಬಾಳು ಕೇಸ್ತೆ, ಮಾರುತಿ ಮಾನೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts